Menu

Home ನಲಿಕಲಿ About ☰ Menu


 

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ / COMPUTER LITERACY TEST

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಬಗ್ಗೆ :
               ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರದ ನೌಕರರು/ ಸಿಬ್ಬಂದಿಗಳಿಗೆ ನಡೆಸಲು ಯೋಜಿಸಿದೆ. ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 104 ಇ-ಆಡಳಿತ 2014, ದಿನಾಂಕ 2 ನೇ ಡಿಸೆಂಬರ್ 2014 ರ ಪ್ರಕಾರ, ಎಲ್ಲಾ ಸರ್ಕಾರಿ ಉದ್ಯೋಗಿಗಳೂ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು (ಎಂದರೆ ಸರ್ಕಾರಿ ಆದೇಶ ಸಂ ಡಿಪಿಎಆರ್ 43 ಎಸ್ ಸಿ ಆರ್ 2008 ಬೆಂಗಳೂರು ದಿನಾಂಕ 07.03.2012 ) ತೆಗೆದುಕೊಳ್ಳುವ ಅಗತ್ಯವಿದ್ದು. ಪ್ರಥಮ ಪ್ರಯತ್ನಕ್ಕೆ ಉದ್ಯೋಗಿಗಳು ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದರೆ, ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಮೊದಲ ಯತ್ನದಲ್ಲಿ ಉತ್ತೀರ್ಣರಾಗಲು ಉದ್ಯೋಗಿಯು ವಿಫಲವಾದಲ್ಲಿ, ನಂತರದ ಪ್ರಯತ್ನದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಯಾವುದೇ ಉದ್ಯೋಗಿಯು ಪರೀಕ್ಷಾ ಶುಲ್ಕವಾಗಿ 359 + ಬ್ಯಾಂಕಿಂಗ್ ಚಾರ್ಜಸ್ ಅನ್ನು ಪಾವತಿಸ ಬೇಕಾಗುತ್ತದೆ.

       ಎಲ್ಲಾ ಸರ್ಕಾರಿ ನೌಕರರು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರಿ ಆದೇಶ ಸಂ ಡಿಪಿಎಆರ್ 43 ಎಸ್ ಸಿ ಆರ್ 2008 ಬೆಂಗಳೂರು ದಿನಾಂಕ 07.03.2012 ರ ಪ್ರಕಾರ ತೆಗೆದುಕೊಳ್ಳುವ ಅಗತ್ಯವಿರುತ್ತದೆ.

   ದಿನಾಂಕ: 31.12.2022 ರೊಳಗೆ ಈ 'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ' ಯನ್ನು ತೇರ್ಗಡೆ ಹೊಂದಲೇ ಬೇಕಿರುತ್ತದೆ. (ಸಿಆಸುಇ 13 ಸೇವನೆ 2022, ಬೆಂಗಳೂರು, ದಿನಾಂಕ: 05-05-2022)

ಅರ್ಜಿ ಸಲ್ಲಿಸುವುದು ಹೇಗೆ : 
● https://clt.karnataka.gov.in/ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅಭ್ಯರ್ಥಿಗಳು/ಸಿಬ್ಬಂದಿವರ್ಗ ಅರ್ಜಿ ಸಲ್ಲಿಸುವ ಅಗತ್ಯವಿದೆ. ಇತರ ಯಾವುದೇ ವಿಧದ/ರೀತಿಯ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

● ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಅಗತ್ಯವಿದೆ. ಪರೀಕ್ಷೆ/ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣವಾಗುವವರೆಗೆ ಅದನ್ನು ಸಕ್ರಿಯವಾಗಿಡಬೇಕು. ಈ ಇಮೇಲ್ ಐಡಿಯನ್ನು ಪರೀಕ್ಷೆ ಮತ್ತು ಪ್ರಮಾಣೀಕರಣ ಏಜೆನ್ಸಿಯ ಮೂಲಕ ಸಂಪರ್ಕಿಸಲು ಬಳಸಲಾಗುತ್ತದೆ. ಯಾವುದೇ ಸನ್ನಿವೇಶದಲ್ಲೂ, ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಕೆಳಗಿನವುಗಳನ್ನು ಮಾಡುವಂತಿಲ್ಲ:
Under no circumstances, Candidate/Employee should not:
ತಮ್ಮ ಇಮೇಲ್ ಐಡಿಗಳನ್ನು ಇತರರೊಂದಿಗೆ ವಿನಿಮಯ ಮಾಡುವುದು
ಇತರ ಯಾವುದೇ ವ್ಯಕ್ತಿಯ ಇಮೇಲ್ ಐಡಿಯನ್ನು ನಮೂದಿಸುವುದು.

● ಅಭ್ಯರ್ಥಿ/ ಸಿಬ್ಬಂದಿ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಹೊಂದಿರದಿದ್ದಲ್ಲಿ, ಆತ/ಆಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಹೊಸ ಇ-ಮೇಲ್ ಐಡಿ ರಚಿಸಬೇಕು.

● ಅಭ್ಯರ್ಥಿಯು ಪಾಸ್ ಪೋರ್ಟ್ ಸೈಜಿನ ಭಾವ ಚಿತ್ರ, (ಗರಿಷ್ಟ ಸೈಜ್: 50 ಕೆ.ಬಿ., ಕನಿಷ್ಟ ಸೈಜ್: 10 ಕೆ.ಬಿ, ಅನುಮೋದಿತ ಫೈಲ್ ವಿಸ್ತರಣೆಗಳು- jpgಅಥವಾ jpeg) ಮತ್ತು “ಸಹಿ“ (ಗರಿಷ್ಟ ಸೈಜ್: 20 ಕೆ.ಬಿ., ಕನಿಷ್ಟ ಸೈಜ್: 10 ಕೆ.ಬಿ, ಅನುಮೋದಿತ ಫೈಲ್ ವಿಸ್ತರಣೆಗಳು- jpgಅಥವಾ jpeg) ಗಳ ಸಾಫ್ಟ್ ಪ್ರತಿಗಳನ್ನು ಅಪ್ಲೋಡ್ ಮಾಡುವ ಅಗತ್ಯವಿರುತ್ತದೆ.
ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಆನ್‌ಲೈನ್ ನೋಂದಣಿ :
● ಅಭ್ಯರ್ಥಿಗಳು / ಉದ್ಯೋಗಿಗಳು ಆನ್‌ಲೈನಲ್ಲಿ ಈ ವೆಬ್‌ಸೈಟ್ https://clt.karnataka.gov.in/ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಎಚ್‌ಆರ್‌ಎಂಎಸ್ ದಾಖಲೆಯ ಪ್ರಕಾರ ಕೆಜಿಐಡಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.

ಮಾನ್ಯ ವಿವರಗಳನ್ನು ನಮೂದಿಸಿದಾಗ, ವೆಬ್‌ಸೈಟ್ ಪರಿಶೀಲಿಸುತ್ತದೆ ಲಭ್ಯವಿದ್ದರೆ ಅಭ್ಯರ್ಥಿ / ನೌಕರರ ವಿವರಗಳನ್ನು ಪ್ರದರ್ಶಿಸುತ್ತದೆ.

● ಅಗತ್ಯವಿರುವ ವಿವರಗಳನ್ನು ನಮೂದಿಸಿ, ಫೋಟೋ ಹಾಗು ಸಹಿಯನ್ನು ಅಪ್‌ಲೋಡ್ ಮಾಡಿದ ನಂತರ, "ಸಲ್ಲಿಸು" ಬಟನ್ ಒತ್ತಿರಿ, ನಂತರ ಸಿಸ್ಟಮ್ ನೋಂದಾಯಿತ ಇ-ಮೇಲ್ ಐಡಿಗೆ ಇ-ಮೇಲ್ ಅನ್ನು ಕಳುಹಿಸುತ್ತದೆ ಮತ್ತುನೋಂದಣಿ ಸಮಯದಲ್ಲಿ ನಿರ್ದಿಷ್ಟಪಡಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುತ್ತದೆ.

ಪರೀಕ್ಷೆಯನ್ನು ನಿಗದಿಪಡಿಸಲು (ಪರೀಕ್ಷೆಯ ಸ್ಲಾಟ್ ಕಾಯ್ದಿರಿಸಲು) ಅಭ್ಯರ್ಥಿ / ಉದ್ಯೋಗಿ ಬಳಕೆದಾರರ ಹೆಸರು / ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಬಹುದು.

● ಪರೀಕ್ಷೆಯ ಸ್ಲಾಟ್ ಅನ್ನು ಒಮ್ಮೆ ಬುಕ್ ಮಾಡಿದ ನಂತರ, ಅಭ್ಯರ್ಥಿ / ಉದ್ಯೋಗಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಬಹುದು ಮತ್ತು ಆಯ್ದ ಪರೀಕ್ಷಾ ಕೇಂದ್ರದಲ್ಲಿ ನಿಗದಿತ ದಿನಾಂಕ ಮತ್ತು ಬ್ಯಾಚ್ ಸಮಯದಲ್ಲಿ ಪರೀಕ್ಷೆಗೆ ಹಾಜರಾಗಬಹುದು.

● ಸೂಚನೆ : ಇತರ ಯಾವುದೇ ವಿಧದ/ರೀತಿಯ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

ಆನ್‌ಲೈನ್ ಪಾವತಿ :
● ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಅಭ್ಯರ್ಥಿ / ಉದ್ಯೋಗಿ ಅನುತ್ತೀರ್ಣವಾದಲ್ಲಿ, ಅಭ್ಯರ್ಥಿ / ಉದ್ಯೋಗಿ ಪ್ರತಿ ಮುಂದಿನ ಪ್ರಯತ್ನಕ್ಕೆ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಅದು ಪಾವತಿಸಿದ ದಿನಾಂಕದಿಂ­­­­ದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ.

● ಅಭ್ಯರ್ಥಿಗಳು / ಉದ್ಯೋಗಿಗಳು ಮಾಸ್ಟರ್ ಅಥವಾ ವೀಸಾ ಅಥವಾ ರೂಪೆ ನಡೆಸುವ ಡೆಬಿಟ್ / ಕ್ರೆಡಿಟ್ ಕಾರ್ಡ್ ಬಳಸಿ ಮತ್ತು ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿ / ಪಾಸ್ವರ್ಡ್ ಬಳಸಿ ಆನ್‌ಲೈನ್ ಪಾವತಿ ಮಾತ್ರ ಮಾಡಬಹುದು.

● ದಯವಿಟ್ಟು ಮುದ್ರಣ / ಶುಲ್ಕ ಪಾವತಿ ರಶೀದಿಯನ್ನು ಪರೀಕ್ಷಾ ಮತ್ತು ಪ್ರಮಾಣೀಕರಣ ಏಜೆನ್ಸಿಗೆ ಕಳುಹಿಸಬೇಡಿ. ಎರಡನೇ ಅಥವಾ ಹೆಚ್ಚಿನ ಪ್ರಯತ್ನ ಪರೀಕ್ಷೆಯ ಶುಲ್ಕ ಪಾವತಿ
ಆನ್‌ಲೈನ್‌ನಲ್ಲಿ ಪಾವತಿಸಬೇಕಾದ ಶುಲ್ಕಗಳು - ಪರೀಕ್ಷೆಯು ಪ್ರತಿ ಹೆಚ್ಚುವರಿ ಪ್ರಯತ್ನಕ್ಕೆ ರೂ .359 + ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ

ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ : 
ಪ್ರಶ್ನೆಗಳ ಸಂಖ್ಯೆ 80, ಪರೀಕ್ಷೆಯ ಅವಧಿ 90 ನಿಮಿಷಗಳು.
ಪ್ರತೀ ಪ್ರಶ್ನೆಗೆ 1 ಅಂಕವಿದ್ದು ತಪ್ಪು ಉತ್ತರಕ್ಕೆ ಯಾವುದೇ ಅಂಕ ಕಡಿತ ಮಾಡುವುದಿಲ್ಲ.
ಎಲ್ಲಾ ಪ್ರಶ್ನೆಗಳೂ MCQ(ಬಹು ಆಯ್ಕೆಯ ಪ್ರಶ್ನೆಗಳು) ವಿಧದಲ್ಲಿದ್ದು ಅಭ್ಯರ್ಥಿಗಳಿಗೆ/ ಸಿಬ್ಬಂದಿಗಳಿಗೆ ಅನುಕರಿಸಿದೆ / ಪ್ರಾಯೋಗಿಕ ಸಹ ಇರುತ್ತವೆ.

ಪರೀಕ್ಷೆ ತೇರ್ಗಡೆಯಾಗಲು ದಿನಾಂಕ: 07.03.2012 ರ ನಂತರ ನೇಮಕಾತಿಯಾದ ಸರ್ಕಾರಿ ನೌಕರರು 50% (40 ಅಂಕಗಳು) ಪಡೆಯಬೇಕು.
ದಿನಾಂಕ: 07.03.2012 ರ ಒಳಗೆ ನೇಮಕಾತಿಯಾದ ಸರ್ಕಾರಿ ನೌಕರರು 35% (28 ಅಂಕಗಳು) ತೆಗೆಯಬೇಕು.


@ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪ್ರಮುಖ ಲಿಂಕ್ ಗಳು@






Subscribe YouTube Channel

ಸಾಮಾನ್ಯ ಜ್ಞಾನ ರಸಪ್ರಶ್ನೆ ಭಾಗ - ೨

 
ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ


Apu
Right 0Wrong 0

Total Questions:

Attempt:

Correct:

Wrong:

Percentage:

ಕನ್ನಡ ವ್ಯಾಕರಣ ರಸಪ್ರಶ್ನೆ ಭಾಗ - 3

 
ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ

Apu
Right 0Wrong 0

Total Questions:

Attempt:

Correct:

Wrong:

Percentage:

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೫

ಭಗವದ್ಗೀತೆ ೫ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು

1➤ ಈ ಕೆಳಗಿನವುಗಳಲ್ಲಿ ಕೃಷ್ಣನ ಪ್ರಕಾರ ಯಾವುದು ಉತ್ತಮ.

2➤ ನಮ್ರರಾದ ಜ್ಞಾನಿಗಳು ಎಲ್ಲರನ್ನೂ ಹೇಗೆ ಕಾಣುತ್ತಾರೆ..

3➤ ಸುಲಭವಾಗಿ ಭೌತಿಕ ಬಂಧನದಿಂದ ಯಾರು ಬಿಡುಗಡೆ ಹೊಂದುತ್ತಾರೆ?

4➤ ಯಾವ ವ್ಯಕ್ತಿಯು ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಸಿದ ವಸ್ತುಗಳು ಭೌತಿಕವಾದದ್ದು ಎಂದು ತಿಳಿಯುತ್ತಾನೋ, ಆ ವ್ಯಕ್ತಿಯ ತ್ಯಾಗವು _ _ _ _ _ _ _.

5➤ ಕೃಷ್ಣನ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ಉತ್ತಮ..

6➤ ನಮ್ಮ ಕರ್ಮದ ಫಲಗಳನ್ನು ನಾವು ಯಾರಿಗೆ ಅರ್ಪಿಸಬೇಕು?

7➤ ನಮ್ರರಾದ ಋಷಿಗಳು ಎಲ್ಲಾ ಜೀವಿಗಳನ್ನು ಸಮಾನರೆಂದು ಏಕೆ ಪರಿಗಣಿಸುತ್ತಾರೆ?

8➤ ಈ ಕೆಳಗಿನವುಗಳಲ್ಲಿ ಯಾವುದು ಶಾಶ್ವತವಾದ ಸಂತೋಷ?

9➤ ಏಕೆ ಒಬ್ಬ ಬುದ್ಧಿವಂತ ವ್ಯಕ್ತಿಗೆ ಭೌತಿಕ ಪ್ರಪಂಚದ ಸಂತೋಷವು ಆನಂದವನ್ನು ಕೊಡುವುದಿಲ್ಲ?

10➤ ನಾವು ಶಾಂತಿಯನ್ನು ಹೇಗೆ ಪಡೆಯಬಹುದು?

Your score is

ಶಿಕ್ಷಣದ ಬಗೆಗಿನ ಪ್ರಸಿದ್ಧ ನುಡಿಮುತ್ತುಗಳು.

"ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೆ ಪಡೆದ ಒಟ್ಟು ಅನುಭವವೇ ಶಿಕ್ಷಣ"

"ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ."
- ಸ್ವಾಮಿ ವಿವೇಕಾನಂದರು.

"ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ."
ಮಾಹಾತ್ಮ ಗಾಂಧೀಜಿ.

"ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು.
ಜಿಡ್ಡು ಕೃಷ್ಣಮೂರ್ತಿ.

"ಮಗುವಿನಲ್ಲಿರುವ ಅಂತಃಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣ"
- ಸ್ವಾಮಿ ವಿವೇಕಾನಂದರು.

"ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ."
- ಡಾ. ಎಸ್. ರಾಧಾಕೃಷ್ಣನ್.

"ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ."
- ಬರ್ಕ.

"ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ.
- ಜಾನ್ ಟ್ಯೂಯ್ಲಿ.

"ಸಮನ್ವಯತೆ, ಸಮತೋಲನ, ಉಪಯುಕ್ತತೆ, ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು."
- ರೂಸೋ.

"ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು."
- ಅಜ್ಞಾತ.

"ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು."
- ನೀತಿವಚನ.

"ಶಿಕ್ಷಣವೇ ಜೀವನದ ಬೆಳಕು"
- ಗೊರೂರು.

"ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ."
- ಡಾ: ಎಸ್. ರಾಧಾಕೃಷ್ಣನ್.

"ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ"
- ಸ್ವಾಮಿ ವಿವೇಕಾನಂದರು.

"ವಿದ್ಯೆ ಗುರುಗಳ ಗುರು."
- ಭ್ರತೃ ಹರಿ.

"ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ."

"ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ."
- ಹರ್ಡೇಕರ್ ಮಂಜಪ್ಪ.

"ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ."
- ಸ್ವಾಮಿ ವಿವೇಕಾನಂದರು.

"ವಿದ್ಯಾಭ್ಯಾಸದಿಂದ ಪ್ರಭುತ್ವ ಬೆಳೆಯದು."
- ಜಾನ್ ಡ್ಯೂಯಿ.

"ಶಿಕ್ಷಣಕ್ಕಿಂತಲೂ ಮನುಷ್ಯರಿಗೆ ಶೀಲ ಚರಿತ್ರೆಗಳು ಹೆಚ್ಚು ಅವಶ್ಯಕ."
- ಸ್ಪೆನ್ಸರ್.

"ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ."
- ಚಾರ್ಲ್ಸ್ ಡೆಕ್ಕನ್.

"ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ."
- ಗಯಟೆ.

ಶಿಕ್ಷಕಿಯೊಬ್ಬರು ಭಾರತದ ರಾಷ್ಟ್ರಪತಿಯಾದ ಸತ್ಯ ಕಥೆ.

 ಶ್ರೀಮತಿ ದ್ರೌಪದಿ ಮುರ್ಮು 

     ಸಾಮಾನ್ಯ ಶಿಕ್ಷಕಿಯಾಗಿ ಭಾರತದ 15ನೇ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು, ನಿನ್ನೆ ಮೊನ್ನೆಯವರೆಗೂ ಅಷ್ಟಾಗಿ ಪರಿಚಿತರಲ್ಲದ ದ್ರೌಪದಿ ಮುರ್ಮು ಅವರ ಹೆಸರು ಇಂದು ಬಹಳ ಜನಪ್ರಿಯವಾಗಿದೆ. ರಾಷ್ಟಾಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆ ಘೋಷಣೆಯಾಗುವವರೆಗೂ ಅವರ ಹೆಸರು ಗೊತ್ತಿರಲಿಲ್ಲ. ಒಡಿಶಾದಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಪ್ರಾರಂಭಿಸಿದ ಮತ್ತು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ದ್ರೌಪತಿ ಮುರ್ಮು. ಇನ್ನು ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.


ವೈಯಕ್ತಿಕ ಜೀವನ  :

ದ್ರೌಪದಿ ಮುರ್ಮು ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರದ ಬೈದಪೋಸಿ ಪ್ರದೇಶದಲ್ಲಿ ಬಿರಾಂಚಿ ನಾರಾಯಣ ತುಡುಗೆ ಸಂತಾಲಿ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಮತ್ತು ಅಜ್ಜ ಗ್ರಾಮಸಭೆಯ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು.

             ಅವರು 2014 ರಲ್ಲಿ ನಿಧನರಾದ ಬ್ಯಾಂಕರ್ ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳು ಇದ್ದರು. 2009 ರಲ್ಲಿ 25 ವರ್ಷದ ಮಗ ತೀರಿಹೋದರು. ಅವರಿಗೆ ಈ ಆಘಾತವನ್ನು ಸಹಿಸಲಾಗಲಿಲ್ಲ ಅವರು ಖಿನ್ನತೆಗೆ ಒಳಗಾದರು. ಬದುಕಿನ ಆಸಕ್ತಿಗಳೆಲ್ಲ ಮಾಯವಾಗಿ, ದುಃಖದಿಂದ ನೊಂದು, ಅದೇ ಸಮಯಕ್ಕೆ ಪ್ರಜಾಪಿತಾ ಬ್ರಹ್ಮಕುಮಾರಿ ಎಂಬ ಆಧ್ಯಾತ್ಮಿಕ ಸಂಸ್ಥೆಗೆ ಹೋದರು. ಆ ಆಧ್ಯಾತ್ಮಿಕತೆಗೆ ಶರಣಾದರು, ಮತ್ತೆ ಎರಡನೇ ಮಗ 2013ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿ. ಅದೇ ತಿಂಗಳಲ್ಲಿ ಆವರ ತಾಯಿ ತೀರಿಕೊಂಡಿದ್ದು, ಸಹೋದರನೂ ಸಾವನ್ನಪ್ಪಿದ್ದ. ಈ ನಾಲ್ಕು ವರ್ಷಗಳಲ್ಲಿ ಹತ್ತಿರದ ಸಂಬಂಧಿಕರನ್ನು ಕಳೆದುಕೊಂಡರು, ಮತ್ತು 2014 ರಲ್ಲಿ ಅವರ ಪತಿ ಶಾಮ್ ಚರಣ್ ನಿಧನರಾದರು.


ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭ :

ಓದಿನಲ್ಲಿ ತುಂಬಾ ಚುರುಕು ಇದ್ದ ದ್ರೌಪದಿ ಮುರ್ಮು ಪ್ರಾರಂಭದಲ್ಲಿ ಶಿಕ್ಷಕಿ ವೃತ್ತಿಯನ್ನು ಮಾಡುತ್ತಾರೆ. ಪ್ರಸಿದ್ದ 'ಶ್ರೀ ಅರಬಿಂದೋ ಸಮಗ್ರ ಶಿಕ್ಷಣ' ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿ ಕೂಡ ಸ್ವಲ್ಪ ಸಮಯ ಕಾರ್ಯನಿರ್ವಹಿಸಿದ್ದರು.

ನಂತರ ಸ್ವಲ್ಪ ಸಮಯ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗದು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಮೊದಲ ಅನುಭವ.

1997ರಲ್ಲಿ ದ್ರೌಪದಿ ಮುರ್ಮು ಬಿಜೆಪಿ ಸೇರುತ್ತಾರೆ, ಕೂಡಲೇ ಅವರಿಗೆ ಕೌನ್ಸಿಲರ್ ಹುದ್ದೆ ನೀಡಲಾಗುವುದು. ತಮ್ಮ ಕಾರ್ಯವೈಖರಿಯಿಂದಾಗಿ ದ್ರೌಪದಿ ಮುರ್ಮು ಒಳ್ಳೆಯ ಹೆಸರು ಗಳಿಸುತ್ತಾರೆ. 2000ನೇ ಇಸವಿಯಲ್ಲಿ ರಾಯರಂಗಪುರ ಪಂಚಾಯತಿನಲ್ಲಿ ಅಧ್ಯಕ್ಷರಾಗುತ್ತಾರೆ, ಹೀಗೆ ರಾಜಕೀಯದಲ್ಲಿ ಬೆಳೆಯಲಾರಂಭಿಸುತ್ತಾರೆ. 2000 ಮಾರ್ಚ್‌ 2002ರವರೆಗೆ ಸ್ವತಂತ್ರ ಶುಲ್ಕದ ವಾಣಿಜ್ಯ ಹಾಗೂ ಸಾರಿಗೆ ಮಂತ್ರಿಯಾಗಿದ್ದರು. ನಂತರ ಮೀನು ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿಯಲ್ಲಿ 2022ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಜಾರ್ಖಂಡ್‌ನ ಗರ್ವನರ್‌ ಆಗ ಕೂಡ ಕಾರ್ಯನಿರ್ವಹಿಸಿದ್ದಾರೆ.


ಬುಡಕಟ್ಟು ಸಮುದಾಯದ ಮಹಿಳೆ :

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ರಾಷ್ಟ್ರಪತಿಯಾದರೆ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದ್ದಾರೆ.ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.


ದ್ರೌಪದಿ ಮುರ್ಮು ಅವರ ಶಿಕ್ಷಣ :

ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀ ಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪತಿ ಶ್ಯಾಮ್ ಚರಣ ಮುರ್ಮು ದಿವಂಗತರಾಗಿದ್ದು, ಇಬ್ಬರು ಪುತ್ರರು ದ್ರೌಪದಿ ಅವರನ್ನು ಅಗಲಿದ್ದಾರೆ. ಪುತ್ರಿ ಇತಿಶ್ರೀ ಮುರ್ಮು ಮಾತ್ರ ಜೊತೆಗಿದ್ದಾರೆ. 2017ರಲ್ಲಿ ದ್ರೌಪದಿ ವೈಯಕ್ತಿಕ 9. 5 ಲಕ್ಷ ರು ಆಸ್ತಿ ಘೋಷಿಸಿಕೊಂಡಿದ್ದರು.


ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ :

ಸಂತಾಲಿ ಮತ್ತು ಒಡಿಯಾ ಭಾಷೆಗಳಲ್ಲಿ ಅದ್ಭುತವಾಗಿ ಮಾತನಾಡಬಲ್ಲ ವಾಗ್ಮಿಯಾದ ಇವರು 1997ರಲ್ಲಿ ರಾಜಕೀಯ ಪ್ರವೇಶಿಸುವ ಮುನ್ನ  ಶಿಕ್ಷಕಿಯಾಗಿದ್ದರು.

2000ನೇ ಇಸವಿಯಲ್ಲಿ ಮಯೂರ್‌ಭಂಜ್‌ ಜಿಲ್ಲೆಯ ರಾಯರಂಗ್‌ಪುರದಲ್ಲಿ ಬಿಜೆಪಿ ಟಿಕೆಟ್‌ ಪಡೆದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶಿಸಿದ್ದರು.

 2000ರಿಂದ 2002ರ ಅವಧಿಯಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ, 2002ರಿಂದ 2004 ಅವಧಿಯಲ್ಲಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಒಡಿಶಾ ಬಿಜೆಪಿಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷೆಯಾಗಿ, ಮಯೂರ್‌ಭಂಜ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಇದರೊಂದಿಗೆ ರಾಜ್ಯಪಾಲರಾಗಿ ನೇಮಕಗೊಂಡ ಒಡಿಶಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮತ್ತು ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಕೀರ್ತಿಯೂ ಅವರದ್ದಾಗಿದೆ. ಅಲ್ಲದೆ, ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ ಮೊದಲಿಗರೂ ಇವರೇ ಎಂಬುದು ವಿಶೇಷ.

13ನೇ ರಾಷ್ಟ್ರಪತಿಯಾಗಿದ್ದ ಪ್ರಣಭ್‌ ಮುಖರ್ಜಿ ಅವರ ಅವಧಿ ಮುಕ್ತಾಯವಾದ (2017ರಲ್ಲಿ) ಸಂದರ್ಭದಲ್ಲಿಯೂ, ಆ ಸ್ಥಾನಕ್ಕೆ ಮುರ್ಮು ಅವರ ಹೆಸರು ಕೇಳಿ ಬಂದಿತ್ತು. ಆದರೆ ಎನ್‌ಡಿಎ ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯಾಗಿ ರಾಮನಾಥ್‌ ಕೋವಿಂದ್‌ ಅವರನ್ನು ಆಯ್ಕೆ ಮಾಡಿತ್ತು.

ರಾಷ್ಟ್ರಪತಿ ಸ್ಥಾನಕ್ಕೆ ಬುಟ್ಟಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲಿಗರು ದ್ರೌಪದಿ. ಅಲ್ಲದೇ ಈ ಸ್ಥಾನ ಅಲಂಕರಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. ಪ್ರತಿಭಾ ಪಟೇಲ್‌ ಅವರು ದೇಶದ 12ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿ (2012–2017) ಸೇವೆ ಸಲ್ಲಿಸಿದ್ದಾರೆ.

      ದ್ರೌಪದಿ ಮುರ್ಮುರವರು ಜುಲೈ 25 ರಂದು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಒಂದು ಸಣ್ಣ ಮನೆಯಿಂದ 350 ಎಕರೆ ಆವರಣ, 190 ಎಕರೆ ಉದ್ಯಾನ ಮತ್ತು 750 ಉದ್ಯೋಗಿಗಳನ್ನು ಹೊಂದಿರುವ ವಿಶಾಲವಾದ ರಾಷ್ಟ್ರಪತಿ ಭವನಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಒಬ್ಬ ಸಾಮಾನ್ಯ ಶಿಕ್ಷಕಿ ಭಾರತದ ರಾಷ್ಟ್ರಪತಿಯಾಗಿದ್ದಾರೆ ಎಂದರೆ ಇದು ಭಾರತದ ಪ್ರಜಾಪ್ರಭುತ್ವದ ಗೆಲುವು ಎನ್ನಬಹುದು....

ಕಾಣದ ಕಡಲಿಗೆ - "ಜಿ. ಎಸ್. ಶಿವರುದ್ರಪ್ಪ"

ಕಾಣದ ಕಡಲಿಗೆ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ ಕಡಲನು
ಕೂಡಬಲ್ಲೆನೆ ಒಂದು ದಿನ || ಕಾ ||

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||

ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ || 
                         ----------0----------

ರಚನೆ : ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ : ಸಿ ಅಶ್ವಥ್

ಐದು ಬೆರಳು ಕೂಡಿ ಒಂದು ಮುಷ್ಟಿಯು - "ಎಚ್ ಎಸ್ ವೆಂಕಟೇಶ ಮೂರ್ತಿ"

'ಐದು ಬೆರಳು ಕೂಡಿ ಒಂದು ಮುಷ್ಟಿಯು'
ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ||

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೄ ಧಾರೆ ತೊಳೆಯಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||
                             ----------೦----------

ರಚನೆ : ಎಚ್. ಎಸ್. ವೆಂಕಟೇಶ ಮೂರ್ತಿ

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ - "ಸಾ ಶಿ ಮರುಳಯ್ಯ"

'ದೇಶ ಒಂದೇ ಭಾರತ'
ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ,
ಇದೇ ನಮ್ಮ ಭಾರತ, ಪುಣ್ಯ ಭೂಮಿ ಭಾರತ ||ವೇಷ ಬೇರೆ||

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ||ವೇಷ ಬೇರೆ||

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕ್ರುತಿ ||ವೇಷ ಬೇರೆ||
                          ----------0----------

ರಚನೆ : ಸಾ ಶಿ ಮರುಳಯ್ಯ

ವಂದೇ ಮಾತರಂ - "ಬಂಕಿಮಚಂದ್ರ ಚಟರ್ಜಿ"

'ವಂದೇ ಮಾತರಂ'
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ || ವಂದೇ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರ ಕರವಾಲೇ
ಅಬಲಾ ಕೆನೊ ಮಾ ಎತೋ ಬಲೆ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ || ವಂದೇ ಮಾತರಂ ||

ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಮಾಮಿತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ || ವಂದೇ ಮಾತರಂ ||
                   ----------೦----------

ರಚನೆ : ಬಂಕಿಮಚಂದ್ರ ಚಟರ್ಜಿ

ಹಿಮಗಿರಿಯ ಶೃಂಗಾ ದೇವನದಿ ಗಂಗಾ

'ಹಿಮಗಿರಿಯ ಶೃಂಗಾ'
ಹಿಮಗಿರಿಯ ಶೃಂಗಾ  ದೇವನದಿ ಗಂಗಾ  
ಮನದಲಿ ಮೂಡಿಪ ಭಾವವಿನೂತನ
ಅನುಪಮ ಉತ್ತುಂಗಾ ಅನುಪಮ ಉತ್ತುಂಗಾ ||ಪ||

ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳು
ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು
ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು ||೧||
 
ಆ ಸುರಲೋಕವ ಮೀರಿಸುವ ನಾಡಿಗೆ ಧುಮುಕಿದ ಭಾಗೀರಥೀ
ಭಾರತ ಮಾತೆಯ ಸಂಗದಲಿ  ಧನ್ಯತೆಯಾಗಿಹ ಭಾಗ್ಯವತಿ
ಹಿಂದೂ ದೇಶದ ಕಣ ಕಣ ಜನ ಮನ ಪಾವನಗೊಳಿಸಿಹ ಪುಣ್ಯವತಿ ||೨||
 
ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ
ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ
ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||೩||

Popular Post