Menu

Home ನಲಿಕಲಿ About ☰ Menu


 

ಕರ್ನಾಟಕದ 7 ಅದ್ಭುತಗಳು | Seven Wonders of Karnataka

             'ವಿಶ್ವದ 7 ಅದ್ಭುತಗಳು’ ಇರುವ ರೀತಿಯಲ್ಲೇ ‘ಕರ್ನಾಟಕದ 7 ಅದ್ಭುತಗಳ'ನ್ನು ಗುರುತಿಸಲು ರಾಜ್ಯದ ನೆಲ, ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ‘ಕರ್ನಾಟಕದ 7 ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿತ್ತು. 

               ಈ  ಆಯ್ಕೆಯನ್ನು  ವೈಜ್ಞಾನಿಕ ವಿಧಾನದಿಂದ ಮಾಡಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಜನರಿಂದ 5000ಕ್ಕೂ ಹೆಚ್ಚು ನಾಮನಿರ್ದೇಶನ, 82 ಲಕ್ಷಕ್ಕೂ ಅಧಿಕ ಜನಮತ ಚಲಾವಣೆ, 1 ವರ್ಷದ ಸುದೀರ್ಘ ಸ್ಥಳ ಸಮೀಕ್ಷೆ, ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರನ್ನು ಒಳಗೊಂಡ 7 ಮಂದಿ ತೀರ್ಪುಗಾರರ ಸಮಿತಿಯ ವಿಚಾರ ಮಂಥನಗಳ ಮೂಲಕ  ‘ಕರ್ನಾಟಕದ 7 ಅದ್ಭುತಗಳ'ನ್ನು ಆಯ್ಕೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ : 25/02/2023 ರಂದು ಶನಿವಾರ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಿಸಿದರು. ಅವುಗಳು ಈ ಕೆಳಗಿನಂತಿವೆ.

ಕರ್ನಾಟಕದ 7 ಅದ್ಭುತಗಳು | Seven Wonders of Karnataka

1. ಹಿರೇಬೆಣಕಲ್ ಶಿಲಾಸಮಾಧಿಗಳು : ಕ್ರಿ.ಪೂ.800ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.

2. ಹಂಪಿ : 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ‘ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

3. ಗೊಮ್ಮಟೇಶ್ವರ : ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.

4. ಗೋಲಗುಮ್ಮಟ : 17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

5. ಮೈಸೂರು ಅರಮನೆ : 19-20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

6. ಜೋಗ ಜಲಪಾತ : ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

7. ನೇತ್ರಾಣಿ ದ್ವೀಪ : ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.


ಕರ್ನಾಟಕದ 7 ಅದ್ಭುತಗಳ ಪರಿಚಯ


1. ಹಿರೇಬೆಣಕಲ್ ಶಿಲಾ ಸಮಾಧಿಗಳು (ಬೃಹತ್ ಶಿಲಾಯುಗದ ಅದ್ಭುತ)

ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ - ಸಾವಿನ ಗೌರವ ಸೂಚಕಗಳು - ಈ ಶಿಲಾಸಮಾಧಿ ಡೋಲ್ಮನ್ ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್ ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್ ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.


2. ಹಂಪಿ (ಪುರಾತತ್ವ ಅದ್ಭುತ)
ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.


3. ಗೋಲ ಗುಮ್ಮಟ (ವಾಸ್ತು ವಿಜ್ಞಾನ ಅದ್ಭುತ)

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲ್ಯಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು. ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.


4. ಶ್ರವಣಬೆಳಗೊಳದ ಗೊಮ್ಮಟೇಶ್ವರ  (ತಾತ್ವಿಕ ಅದ್ಭುತ)

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕಿಸ್ತನ ಪ್ರತಿಮೆ ಹೇಗೋ, ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ - ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ. ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು. ಭರತ-ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ. ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ಭರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು. ನಮ್ಮ ಈ "ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ" ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.


5. ಮೈಸೂರು ಅರಮನೆ (ರಾಜಪರಂಪರಾ ಅದ್ಭುತ)

ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು ಮೈಸೂರಿನ ಅರಮನೆ ಎಂದೇ ಖ್ಯಾತವಾದ ಮೈಸೂರಿನ ಅಂಬಾವಿಲಾಸ ಅರಮನೆ. ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಈ ಅರಮನೆ ದೀಪಾಲಂಕಾರಗೊಂಡಾಗಲಂತೂ ಬಂಗಾರದ ಅರಮನೆಯಂತೆಯೇ ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ. ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜ್ರಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೇ ಮಾದರಿಯಾಗಿದ್ದರು. ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು... ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜ-ರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.


6. ಜೋಗ ಜಲಪಾತ (ನೈಸರ್ಗಿಕ ಅದ್ಭುತ - ನೆಲ)

ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.


7. ನೇತ್ರಾಣಿ ದ್ವೀಪ (ನೈಸರ್ಗಿಕ ಅದ್ಭುತ - ಜಲ) 
ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ. ನೇತ್ರಾಣಿ ದ್ವೀಪದ ಕಡಲ ಗರ್ಭದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.

ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು

ಧಾರವಾಡ    -   ಪೇಡಾ ನಗರಿ, ವಿದ್ಯಾಕಾಶಿ,                                            ಸಾಂಸ್ಕೃತಿಕ ನಗರಿ 

ಗದಗ           -    ಮುದ್ರಣ ನಗರಿ

ಬೆಳಗಾವಿ      -   ಕುಂದಾನಗರಿ 

ಮಂಡ್ಯ         -   ಸಕ್ಕರೆ ನಾಡು 

ಮೈಸೂರು     -   ಮಲ್ಲಿಗೆ ನಗರಿ / ಸಾಂಸ್ಕೃತಿಕ ನಗರಿ

ಬೆಂಗಳೂರು   -   ಉದ್ಯಾನನಗರಿ 

ತುಮಕೂರು    -  ಕಲ್ಪತರು ನಾಡು 

ಚಿತ್ರದುರ್ಗ      -  ದುರ್ಗದ ನಾಡು / ಕೋಟೆನಾಡು

ಬಾಗಲಕೋಟೆ - ಕೋಟೆನಾಡು 

ಹಾವೇರಿ          -  ಏಲಕ್ಕಿ ನಾಡು 

ಕೋಲಾರ         -  ಚಿನ್ನದ ನಗರಿ

ಬಳ್ಳಾರಿ             -  ಬಿಸಿಲನಾಡು, ಗಣಿನಾಡು

ದಾವಣಗೆರೆ      -  ಬೆಣ್ಣೆ  ನಗರಿ 

ಮಂಗಳೂರು    -  ಬಂದರು ನಗರಿ 

ಉಡುಪಿ           -  ಕೃಷ್ಣ  ನಗರಿ 

ಚಿಕ್ಕಮಗಳೂರು -  ಕಾಫಿ ನಾಡು 

ಕೊಡಗು           -  ಮಂಜಿನ ನಗರಿ 

ರಾಯಚೂರು   -   ಎಡೆದೊರೆ ನಾಡು / ಬಿಸಿಲ ನಾಡು

ವಿಜಯಪುರ    -   ಗುಮ್ಮಟ ನಗರಿ 

ಬೀದರ           -   ಸೂಫಿ ನಾಡು 

ಕಲಬುರ್ಗಿ       -   ಶರಣರ ನಾಡು 

ಉತ್ತರ ಕನ್ನಡ  -   ಕಡಲ ನಗರಿ / ಅರಣ್ಯಗಳ ನಾಡು

ರಾಮನಗರ     -   ರೇಷ್ಮೆ ನಾಡು 

ಶಿವಮೊಗ್ಗ        -  ಮಲೆನಾಡ ಹೆಬ್ಬಾಗಿಲು  

ಕೊಪ್ಪಳ        -  ಭತ್ತದ ಕಣಜ  


#ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು  & 4 ಕಂದಾಯ ವಿಭಾಗಗಳು

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು

 ನಮ್ಮ  ಕರ್ನಾಟಕ ರಾಜ್ಯವು 1956 ನವ್ಹೆಂಬರ್ 1 ರಂದು ಮೈಸೂರು ರಾಜ್ಯವಾಗಿ ಏಕೀಕರಣವಾಯಿತು.  1973 ನವ್ಹೆಂಬರ್ 1 ಕ್ಕೆ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕಕ್ಕೆ  ಎರಡು ಸಾವಿರ ವರ್ಷಗಳ ಇತಿಹಾಸವಿದೆ.  ಆಡಳಿತದ ಅನುಕೂಲಕ್ಕಾಗಿ  ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು.  ರಾಜ್ಯ ಸರ್ಕಾರ ಆಡಳಿತದ ಅನುಕೂಲಕ್ಕಾಗಿ ಪ್ರಸ್ತುತದ ಮೂವತ್ತೊಂದು ಜಿಲ್ಲೆಗಳನ್ನು ನಾಲ್ಕು ಕಂದಾಯ ವಿಭಾಗಗಳಾಗಿ ವಿಂಗಡಿಸಿದೆ.

 31 ಜಿಲ್ಲೆಗಳು ಪಟ್ಟಿ 

1. ಬೆಳಗಾವಿ 

2. ಕಲ್ಬುರ್ಗಿ 

3. ಬೀದರ್ 

4. ವಿಜಯಪುರ 

5. ಬಳ್ಳಾರಿ 

6. ರಾಯಚೂರು 

7. ಗದಗ

8. ಬಾಗಲಕೋಟೆ 

9. ಧಾರವಾಡ

10. ಹಾವೇರಿ 

11. ಕೊಪ್ಪಳ 

12. ಚಿತ್ರದುರ್ಗ 

13. ಯಾದಗಿರಿ 

14. ಉತ್ತರಕನ್ನಡ 

15. ರಾಮನಗರ 

16. ಮಂಡ್ಯ 

17. ಮೈಸೂರು 

18. ಹಾಸನ

19. ಕೊಡಗು 

20. ಬೆಂಗಳೂರು ನಗರ

21. ಬೆಂಗಳೂರು ಗ್ರಾಮಾಂತರ 

22. ಕೋಲಾರ 

23. ದಾವಣಗೆರೆ 

24. ತುಮಕೂರು 

25. ದಕ್ಷಿಣಕನ್ನಡ

26. ಉಡುಪಿ 

27. ಚಾಮರಾಜನಗರ 

28. ಶಿವಮೊಗ್ಗ 

29. ಚಿಕ್ಕಬಳ್ಳಾಪುರ 

30. ಚಿಕ್ಕಮಗಳೂರು

31. ವಿಜಯನಗರ 


ಕಂದಾಯ ವಿಭಾಗಗಳು & ಅವುಗಳಲ್ಲಿನ  ಜಿಲ್ಲೆಗಳು :

ಬೆಂಗಳೂರು ವಿಭಾಗ :-

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.


ಬೆಳಗಾವಿ ವಿಭಾಗ :-

ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ


ಕುಲಬುರ್ಗಿ ವಿಭಾಗ :-

ಬಳ್ಳಾರಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ


ಮೈಸೂರು ವಿಭಾಗ :-

ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು


#ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು 

ಕರ್ನಾಟಕದ 31 ಜಿಲ್ಲೆ ಮತ್ತು 263 ತಾಲೂಕುಗಳ ಪಟ್ಟಿ | Karnataka Districts and Taluqs

 ಕರ್ನಾಟಕದ ರಾಜ್ಯದ 31 ಜಿಲ್ಲೆ  &  263 ತಾಲೂಕುಗಳ ಹೆಸರು

ಕರ್ನಾಟಕದ 31 ಜಿಲ್ಲೆಗಳು & ಅವುಗಳಲ್ಲಿನ ತಾಲೂಕುಗಳು

ಜಿಲ್ಲೆಯ ಹೆಸರು

ತಾಲೂಕಿನ ಹೆಸರು

 

 

 

 

1. ಬಾಗಲಕೋಟೆ

1. ಬಾಗಲಕೋಟೆ 

2. ಜಮಖಂಡಿ 

3. ಮುಧೋಳ

4. ಬಾದಾಮಿ

5. ಬೀಳಗಿ 

6. ಹುನಗುಂದ 

7. ರಬಕವಿ ಬನಹಟ್ಟಿ 

8. ಇಳಕಲ್ಲ 

9. ಗುಳೇದಗುಡ್ಡ 

10. ತೇರದಾಳ   

 

 2. ಬೆಂಗಳೂರು ನಗರ

11. ಬೆಂಗಳೂರು ನಗರ 

12. ಯಲಹಂಕ 

13. ಆನೇಕಲ್ 

14. ಕೆಂಗೇರಿ 

15. ಕೃಷ್ಣರಾಜ ಪುರ

 

3. ಬೆಂಗಳೂರು ಗ್ರಾಮಾಂತರ

16. ದೊಡ್ಡಬಳ್ಳಾಪುರ

17. ದೇವನಹಳ್ಳಿ

18. ಹೊಸಕೊಟೆ

19. ನೆಲಮಂಗಲ

 

 

 

4. ರಾಮನಗರ

20. ರಾಮನಗರ

21. ಚನ್ನಪಟ್ಟಣ

22. ಕನಕಪುರ

23. ಮಾಗಡಿ

24. ಕುಣಿಗಲ್

25. ಹಾರೋಹಳ್ಳಿ

26. ಹುಲಿಯೂರುದುರ್ಗ

27. ಕೋಡಿಹಳ್ಳಿ

 

 

 

5. ಬೆಳಗಾವಿ

28. ಬೆಳಗಾವಿ

29. ಅಥಣಿ

30. ಬೈಲಹೊಂಗಲ

31. ಚಿಕ್ಕೋಡಿ

32. ಗೋಕಾಕ

33. ಮೂಡಲಗಿ

34. ಹುಕ್ಕೇರಿ

35. ಖಾನಾಪುರ

36. ರಾಯಭಾಗ

37. ಕಾಗವಾಡ

38. ರಾಮದುರ್ಗ

 

 

 

 6. ಬಳ್ಳಾರಿ

45. ಬಳ್ಳಾರಿ

46. ಹೊಸಪೇಟೆ

47. ಕಂಪ್ಲಿ

48. ಹೂವಿನ ಹಡಗಲಿ

49. ಕೂಡ್ಲಿಗಿ

50. ಸಂಡೂರು

51. ಶಿರುಗುಪ್ಪ

52. ಕುರುಗೋಡ

53. ಕೊಟ್ಟೂರು

54. ಹಗರಿಬೊಮ್ಮನಹಳ್ಳಿ

55. ಹರಪನಹಳ್ಳಿ

 

 

 7. ಬೀದರ

56. ಬೀದರ

57. ಬಸವಕಲ್ಯಾಣ

58. ಭಾಲ್ಕಿ

59. ಹುಮ್ನಾಬಾದ್

60. ಔರಾದ

61. ಚಿಟಗುಪ್ಪಾ

62. ಹುಲಸೂರ

63. ಕಮಲಾ ನಗರ

 

 

 

8. ವಿಜಯಪುರ

64. ವಿಜಯ ಪುರ

65. ಇಂಡಿ

66. ಬಸವನ ಬಾಗೇವಾಡಿ

67. ತಾಳಿಕೋಟಿ

68. ಬಬಲೇಶ್ವರ

69. ತಿಕೋಟಾ

70. ಕೊಲ್ಹಾರ

71. ನಿಡಗುಂದಿ

72. ದೇವರ ಹಿಪ್ಪರಗಿ

73. ಚಡಚಣ

74. ಆಲಮೇಲ

 

 

 

 9. ಚಾಮರಾಜ ನಗರ

75. ಚಾಮರಾಜನಗರ

76. ಗುಂಡ್ಲುಪೇಟೆ

77. ಕೊಳ್ಳೆಗಾಲ

78. ಯಳಂದೂರು

79. ಹನೂರು

80. ಚಿಕ್ಕಲ್ಲೂರು

81. ನಾಗಮಲೆ

82. ಬಿಳಿಗಿರಿ ರಂಗನಬೆಟ್ಟ

83. ಲಕ್ಕೆನಹಳ್ಳಿ

 

 

 

 

10. ಚಿಕ್ಕಮಗಳೂರು

84. ಚಿಕ್ಕಮಗಳೂರು

85. ಕಡೂರು

86. ಕೊಪ್ಪ

87. ಮೂಡಿಗೆರೆ

88. ನರಸಿಂಹರಾಜಪುರ

89. ಶೃಂಗೇರಿ

90. ತರಿಕೆರೆ

91. ಕಳಸ

92. ಅಜ್ಜಂಪುರ

93. ಬಾಳೆಹೊನ್ನೂರ

94. ಸಖರಾಯ

 

 

 


 11. ಚಿತ್ರದುರ್ಗ

95. ಚಿತ್ರದುರ್ಗ

96. ಚಳ್ಳಕೆರೆ

97. ಹಿರಿಯೂರು

98. ಹೊಳಲ್ಕೆರೆ

99. ಹೊಸದುರ್ಗ

100. ಮೊಳಕಾಲ್ಮೂರು

101. ಪರಶುರಾಂಪುರ

102. ಭರ್ಮಸಾಗರ

103. ಭೀಮಸಮುದ್ರ

104. ಧರ್ಮಪುರ

105. ಬೂದಿಹಾಳ

106. ವಾಣಿವಿಲಾಸ ಸಾಗರ

 

 

 12. ದಕ್ಷಿಣ ಕನ್ನಡ

107. ಮಂಗಳೂರು

108. ಪುತ್ತೂರು

109. ಬಂಟ್ವಾಳ

110. ಬೆಳ್ತಂಗಡಿ

111. ಸುಳ್ಯ

112. ಮೂಡುಬಿದಿರೆ

113. ಕಡಬ

 

 

13. ದಾವಣಗೆರೆ

114. ದಾವಣಗೆರೆ

115. ಹರಿಹರ

116. ಚನ್ನಗಿರಿ

117. ಹೊನ್ನಾಳಿ

118. ಜಗಳೂರು

119. ನ್ಯಾಮತಿ

 

 

 14. ಧಾರವಾಡ

120. ಧಾರವಾಡ

121. ಹುಬ್ಬಳ್ಳಿ

122. ಕಲಘಟಗಿ

123. ಕುಂದಗೋಳ

124. ನವಲಗುಂದ

125. ಅಳ್ನಾವರ

126. ಅಣ್ಣಿಗೇರಿ

126. ಹುಬ್ಬಳ್ಳಿ ನಗರ

 

 

 15. ಗದಗ

128. ಗದಗ-ಬೆಟಗೇರಿ

129. ನರಗುಂದ

130. ಮುಂಡರಗಿ

131. ರೋಣ

132. ಶಿರಹಟ್ಟಿ

133. ಗಜೇಂದ್ರಗಡ

134. ಲಕ್ಷ್ಮೇಶ್ವರ

 

 

 

 16. ಕಲಬುರಗಿ

135. ಕಲಬುರಗಿ

136. ಆಳಂದ

137. ಸೇಡಂ

138. ಅಫಜಲ್ಪುರ

139. ಚಿಂಚೋಳಿ

140. ಚಿತ್ತಾಪುರ

141. ಜೀವರ್ಗಿ

142. ಕಾಳಗಿ

143. ಯಡ್ರಾಮಿ

144. ಶಹಾಬಾದ

145. ಕಮಲಾಪುರ

 

 

 

 17. ಯಾದಗಿರಿ

146. ಯಾದಗಿರಿ

147. ಶಹಾಪುರ

148. ಸುರಪುರ

149. ಹುಣಸಗಿ

150. ವಡಗೇರಾ

151. ಗುರುಮಠಕಲ್

152. ಕೆಂಬಾವಿ

153. ಸೈದಾಪುರ

154. ಕೊಡೆಕಲ್

155. ಖಾನಪುರ

 

 

 18. ಹಾಸನ

156. ಹಾಸನ

157. ಅರಸಿಕೆರೆ

158. ಚೆನ್ನರಾಯಪಟ್ಟಣ

159. ಹೊಳೇನರಸೀಪುರ

160. ಸಕಲೇಶಪುರ

161. ಆಲೂರು

162. ಅರಕಲಗೂಡು

163. ಬೇಲೂರು

 

19. ಹಾವೇರಿ

164. ಹಾವೇರಿ

165. ರಾಣಿಬೆನ್ನೂರು

166. ಬ್ಯಾಡಗಿ

167. ಹಾನಗಲ್ಲ

168. ಸವಣೂರ

169. ಹಿರೇಕೇರೂರು

170. ಶಿಗ್ಗಾಂವ

 

 

20. ಕೊಡಗು

171. ಮಡಿಕೇರಿ

172. ಸೋಮವಾರಪೇಟೆ

173. ವಿರಾಜಪೇಟೆ

174. ಕುಶಾಲನಗರ

175. ಪೊನ್ನಂಪೇಟೆ

176. ಭಾಗಮಂಡಲ

 

 21. ಕೋಲಾರ

177. ಕೋಲಾರ

178. ಬಂಗಾರಪೇಟೆ

179. ಮಾಲೂರು

180. ಮುಳಬಾಗಿಲು

181. ಶ್ರೀನಿವಾಸಪುರ

 

 

 22. ಚಿಕ್ಕಬಳ್ಳಾಪುರ

182. ಚಿಕ್ಕಬಳ್ಳಾಪುರ

183. ಚಿಂತಾಮಣಿ

184. ಗೌರಿಬಿದನೂರು

185. ಶಿಡ್ಲಘಟ್ಟ

186. ಬಾಗೇಪಲ್ಲಿ

187. ಗುಡಿಬಂಡೆ

188. ಚೇಲೂರು

 

 

 23. ಕೊಪ್ಪಳ

189. ಕೊಪ್ಪಳ

190. ಗಂಗಾವತಿ

191. ಕುಷ್ಟಗಿ

192. ಯಲಬರ್ಗಾ

193. ಕೂಕನೂರ

194. ಕಾರಟಗಿ

195. ಕನಕಗಿರಿ

 

 

 24. ಮಂಡ್ಯ

196. ಮಂಡ್ಯ

197. ಮದ್ದೂರು

198. ಮಳವಳ್ಳಿ

199. ಶ್ರೀರಂಗಪಟ್ಟಣ

200. ಕೃಷ್ಣರಾಜ ಪೇಟೆ

201. ನಾಗಮಂಗಲ

202. ಪಾಂಡವಪುರ

 

 

 25. ಮೈಸೂರು

203. ಮೈಸೂರು

204. ಹುಣಸೂರು

205. ಕೃಷ್ಣರಾಜನಗರ

206. ನಂಜನಗೂಡು

207. ಹೆಗ್ಗಡದೇವನಕೋಟೆ

208. ಪಿರಿಯಾಪಟ್ಟಣ

209. ಟಿ.ನರಸೀಪುರ

 

 

26. ರಾಯಚೂರು

210. ರಾಯಚೂರು

211. ಮಾನ್ವಿ

212. ಸಿಂಧನೂರು

213. ದೇವದುರ್ಗ

214. ಲಿ೦ಗಸೂಗೂರು

215. ಮಸ್ಕಿ

216. ಶಿರವಾರ

 

 

 27. ಶಿವಮೊಗ್ಗ

217. ಶಿವಮೊಗ್ಗ

218. ಸಾಗರ

219. ಹೊಸನಗರ

220. ಶಿಕಾರಿಪುರ

221. ಸೊರಬ

222. ತೀರ್ಥಹಳ್ಳಿ

223. ಭದ್ರಾವತಿ

 

 

 

 

 

 

28. ತುಮಕೂರು

224. ತುಮಕೂರು

225. ಚಿಕ್ಕನಾಯಕನಹಳ್ಳಿ

226. ಕುಣಿಗಲ್

227. ಮಧುಗಿರಿ

228. ಶಿರಾ

229. ತಿಪಟೂರು

230. ಗುಬ್ಬಿ

231. ಕೊರಟಗೆರೆ

232. ಪಾವಗಡ

233. ತುರುವೆಕೆರೆ

234. ಹುಲಿಯೂರು ದುರ್ಗ

235. ಚೇಳೂರು

236. ಹುಲಿಯಾರ

237. ಬುಕ್ಕಪಟ್ಟಣ

238. ಹೆಬ್ಬೂರು

239. ಕೋಡಿಗೆನಹಳ್ಳಿ

240. ಪಟ್ಟನಾಯಕನಹಳ್ಳಿ

241. ಶೈಲಾಪುರ

242. ಉಡುಪಿ

 

 29. ಉಡುಪಿ

243. ಕಾರ್ಕಳ

244. ಕುಂದಾಪುರ

245. ಬ್ರಹ್ಮಾವರ

246. ಬೈಂದೂರು

247. ಕಾರವಾರ

 

 

 

 30. ಉತ್ತರ ಕನ್ನಡ

248. ಅಂಕೋಲಾ

249. ಕುಮಟಾ

250. ಹೊನ್ನಾವರ

251. ಭಟ್ಕಳ

252. ಶಿರಸಿ

253. ಸಿದ್ಧಾಪುರ

254. ಯಲ್ಲಾಪುರ

255. ಮುಂಡಗೋಡು

256. ಹಳಿಯಾಳ

257. ಜೋಯ್ಡಾ

 

 

 31. ವಿಜಯನಗರ

258. ಹೊಸಪೇಟೆ

259. ಹಗರಿಬೊಮ್ಮನಹಳ್ಳಿ

260. ಕುಡ್ಲಿಗಿ

261. ಕೊಟ್ಟೂರು

262. ಹರಪನಹಳ್ಳಿ

263. ಹೂವಿನ ಹಡಗಲಿ


Popular Post