ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಗುರು ಸ್ತೋತ್ರಮ್ | Guru Stotram.


ಗುರು ಬ್ರಹ್ಮ ಗುರು ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ||
(ಗುರುವೇ ಬ್ರಹ್ಮ, ಗುರುವೇ ವಿಷ್ಣು,ಗುರುವೇ ದೇವನಾದ ಮಹೇಶ್ವರ
ಗುರುವೇ ಸಾಕ್ಷಾತ್ ಪರಬ್ರಹ್ಮ ಅಂತಹ ಶ್ರೀ ಗುರುವಿಗೆ ನಮಸ್ಕಾರ)


 ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||
(ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ
 ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀ ಗುರುವಿಗೆ ನಮಸ್ಕಾರ)


ಅಖಂಡ ಮಂಡಲಾಕಾರಂ ವ್ಯಾಪ್ತಮ್ ಯೇನ ಚರಾಚರಮ್
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||
(ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ವವು
 ಯಾರಿಂದ ತೋರಿಸಲ್ಪಟ್ಟಿತೋ ಅಂತಹ ಶ್ರೀ ಗುರುವಿಗೆ ನಮಸ್ಕಾರ)

ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು.

ಕಲಿಸು ಗುರುವೆ ಕಲಿಸು
ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು    (2 ಸಲ)  
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು (2 ಸಲ)
ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು  (2 ಸಲ)
ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು || ಪ ||


ಬೆವರಿಳಿಸಿ ಗಳಿಸಿದ ಒಂದು ಕಾಸು ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದ ಕಲಿಸು (2 ಸಲ)
ಸೋಲು ಗೆಲುವಿನಲಿ ಸಮ ಚಿತ್ತದಿಂದಿರಲು (2 ಸಲ)
ಶತ್ರುಗಳಿಗೂ ಸನ್ಮಿತ್ರ ನಾಗಿರಲು ಕಲಿಸು (2 ಸಲ)
ಹಸಿರು ಮಲೆ ಹೂವಲಿ ನಾ ಧ್ಯಾನಿಸುವುದ ಕಲಿಸು
ಜಾಣನಾಗಲು ಕಲಿಸು, ಜಾಣನಾಗಲು ಕಲಿಸು ||೧||


ಜಗವೆಲ್ಲ ಒಂದಾಗಿ ಜರಿದರು ಸರಿಯೆ ನನ್ನನ್ನೆ ನಾ ನಂಬುವ ಬಗೆ ನೀ ಕಲಿಸು (2 ಸಲ)
ಅಳುವಿನಲಿ ಅವಮಾನ ಇಲ್ಲವೆಂಬುದು ಕಲಿಸು (2 ಸಲ)
ನನ್ನನ್ನೆ ನಾ ನೋಡಿ ನಗುವುದನು ಕಲಿಸು (2 ಸಲ)
ಮಾನವಿಯತೆಯಲಿ ನಾ ಮೆರೆಯುವುದನು ಕಲಿಸು (2 ಸಲ)
ಮಾನವೀಯತೆಯಲಿ ನಾ ಕರಗುವುದನು ಕಲಿಸು
ಜಾಣನಾಗಲು ಕಲಿಸು, ಜಾಣನಾಗಲು ಕಲಿಸು ||೨||
                      ----------೦----------

ರಚನೆ : ಈ ಹಾಡು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಪ್ರಸಿದ್ಧ ಪತ್ರದ ಭಾವಾನುವಾದ. ಎಸ್. ರಾಮನಾಥ ರಚನೆ.

ವಿಶ್ವದ ಹೊಸ 7 ಅಧಿಕೃತ ಅದ್ಭುತಗಳು

The New 7 Official Wonders of the World

1. ಕೊಲೊಸಿಯಮ್ 

ರೋಮ್ನ ಕೊಲೊಸಿಯಮ್ (70 - 82 ಸಾ.ಶ) ರೋಮ್, ಇಟಲಿ

ರೋಮ್‌ನ ಮಧ್ಯಭಾಗದಲ್ಲಿ ಈ ಪ್ರಸಿದ್ಧ ಬಯಲು ರಂಗ ಮಂದಿರವನ್ನು ಯಶಸ್ವಿ ಸೈನಿಕದಳಗಳಿಗೆ ಪ್ರಶಸ್ತಿ ನೀಡಲು ಮತ್ತು ರೋಮ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶೀಸಲು ನಿರ್ಮಿಸಲಾಯಿತು. ಇದರ ವಿನ್ಯಾಸದ ಪರಿಕಲ್ಪನೆಯೂ ಇಂದಿಗೂ ಪ್ರಸ್ತುತವಾಗಿದೆ ಮತ್ತು ಪ್ರತಿ ಅಧುನಿಕ ಕ್ರೀಡಾ ಮೈದಾನವು ಸುಮಾರು 2000 ವರ್ಷಗಳ ನಂತರವೂ ಅಂತಿಮವಾಗಿ ಕೊಲೊಸಿಯಮ್‌ನ ಮೂಲ ವಿನ್ಯಾಸದ ಸಮ್ಮೋಹಕ ಮುದ್ರೆಯನ್ನು ಹೊಂದಿರುತ್ತದೆ. ವೀಕ್ಷಕರ ಸಂತೋಷಕ್ಕಾಗಿ, ಈ ಅಂಗಣದಲ್ಲಿ ನೆಡೆದ ಕ್ರೂರ ಹೋರಾಟ ಮತ್ತು ಪಂದ್ಯಾಟಗಳ ಬಗ್ಗೆ ಚಲನಚಿತ್ರ ಮತ್ತು ಇತಿಹಾಸದ ಪುಸ್ತಕಗಳ ಮೂಲಕ ಇಂದು,ನಾವು ಇನ್ನೂ ಹೆಚ್ಚು ಅರಿವನ್ನು ಹೊಂದಿದ್ದೇವೆ.

2. ಕ್ರಿಸ್ಟ್ ದಿ ರಿಡೀಮರ್ 

ಕ್ರಿಸ್ಟ್ ದಿ ರಿಡೀಮರ್ (1931) ರಿಯೊ ಡಿ ಜನೇರೋ, ಬ್ರೆಜಿಲ್

ಏಸು ಕ್ರಿಸ್ತನ ಈ ವಿಗ್ರಹವು ಸುಮಾರು 38 ಮೀಟರ್ ಎತ್ತರವಾಗಿದೆ, ಕೊರ್ಕೊವಾಡೊ ಪರ್ವತದ ಶಿಖರದ ಮೇಲಿದ್ದು ರಿಯೊ ಡಿ ಜನೇರೋವನ್ನು ಮೇಲಿನಿಂದ ಗಮನಿಸುವಂತಿದೆ. ಇದನ್ನು ಬ್ರೆಜಿಲ್‌ನ ಹೆಯಿಟರ್ ಡಾ ಸಿಲ್ವ ಕೊಸ್ಟಾ ವಿನ್ಯಾಸಗೊಳಿಸಿದರು ಮತ್ತು ಪ್ರೆಂಚ್ ಶಿಲ್ಪಿ ಪೌಲ್ ಲಾಂಡೊವ್ಸ್‌ಕಿ ರಚಿಸಿದರು, ಇದು ಪ್ರಪಂಚದ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಈ ವಿಗ್ರಹವನ್ನು ನಿರ್ಮಿಸಲು ಐದು ವರ್ಷಗಳ ಕಾಲ ತೆಗೆದುಕೊಳ್ಳಲಾಯಿತು ಮತ್ತು ಆಕ್ಟೋಬರ್, 12, 1931ರಲ್ಲಿ ಉದ್ಘಾಟಿಸಲಾಯಿತು. ಇದು ನಗರದ ಮತ್ತು ತೆರೆದ ಬಾಹುಗಳಿಂದ ಪ್ರವಾಸಿಗರನ್ನು ಸ್ವೀಕರಿಸುವ, ಬ್ರೆಜಿಲಿನ ಜನರ ಪ್ರೀತಿಯ ಒಂದು ಲಾಂಛನವಾಗಿದೆ.

3. ತಾಜ್ ಮಹಲ್ 

ತಾಜ್ ಮಹಲ್ (1630 ಸಾ.ಶ) ಅಗ್ರಾ, ಭಾರತ

ಈ ಅಗಾದ ಭವ್ಯ ಸಮಾಧಿಯನ್ನು, ಐದನೆ ಮುಸ್ಲಿಂ ಮೊಘಲ್ ರಾಜ, ಷಹಾ ಜಹಾನ್‌ನ ಆದೇಶದ ಮೇರೆಗೆ, ಆತನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಲಾಯಿತು. ಬಿಳಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ನಿರ್ಮಿಸಿದ ಉದ್ಯಾನದ ಆವರಣದಲ್ಲಿ ನಿಂತಿದೆ. ತಾಜ್ ಮಹಲ್ ಅನ್ನು ಭಾರತದಲ್ಲಿ ಮುಸ್ಲಿಂ ಕಲೆಯ ಅತಿಶ್ರೇಷ್ಠ ಆಭರಣ ಎಂದು ಪರಿಗಣಿಸಲಾಗುತ್ತದೆ. ನಂತರ ರಾಜನನ್ನು ಕಾರ ಗೃಹದಲ್ಲಿಡಲಾಯಿತು ಮತ್ತು ಆತ ಆತನ ಜೈಲಿನ ಸಣ್ಣ ಕಿಟಿಕಿಯಿಂದ ಮಾತ್ರ ತಾಜ್ ಮಹಲ್‌ ಅನ್ನು ನೋಡಲು ಸಾಧ್ಯವಾಗುತ್ತಿತ್ತು ಎಂದು ಹೇಳಲಾಗುತ್ತದೆ.

4. ಪಿರಮಿಡ್

ಚಿಚಿನ್ ಇಟ್ಜಾದಲ್ಲಿನ ಪಿರಮಿಡ್ (ಸಾ.ಶ.ಪೂ.800 ಮುನ್ನ) ಯುಕಾಟನ್ ಪರ್ಯಾಯದ್ವೀಪ, ಮೆಕ್ಸಿಕೊ

ಚಿಚಿನ್ ಇಟ್ಜಾವು, ಅತ್ಯಂತ ಜನಪ್ರಿಯ ಮಾಯನ್ ದೇವಾಲಯ ನಗರ, ಇದು ಮಾಯನ್ ನಾಗರಿಕತೆಯ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ ಸೇವೆ ಸಲ್ಲಿಸಿದೆ. ಇದರ ವಿವಿಧ ನಿರ್ಮಾಣಗಳು- ಕುಕುಲ್ಕನ್‌ನ ಪಿರಮಿಡ್, ಚಾಕ್ ಮೂಲ್‌ನ ದೇವಾಲಯ, ಸಾವಿರ ಸ್ತಂಬಗಳ ಹಜಾರ, ಮತ್ತು ಕೈದಿಗಳ ಆಟವಾಡುವ ಮೈದಾನ- ಇವುಗಳನ್ನು ಇಂದಿಗೂ ಕಾಣಬಹುದು ಮತ್ತು ಇವುಗಳು ವಾಸ್ತುಶಾಸ್ತ್ರದ ಅವಕಾಶ ಮತ್ತು ಸಂಯೋಜನೆಗೆ ಒಂದು ಅಸಾಮಾನ್ಯವಾದ ಬದ್ಧತೆಯ ಪ್ರದರ್ಶಕವಾಗಿದೆ. ಎಲ್ಲಾ ಮಾಯನ್ ದೇವಾಲಯಗಳಲ್ಲಿ, ಅಂತಿಮವಾದ ಮತ್ತು ಬಹುಮಟ್ಟಿಗೆ ಉತ್ಕೃಷ್ಟವಾಗಿರುವುದು ಪಿರಮಿಡ್‌ ಆಗಿದೆ.

5. ಪೆಟ್ರಾ 

ಪೆಟ್ರಾ (9 ಸಾ.ಶ.ಪೂ - 40 ಸಾ.ಶ) ಜೋರ್ಡಾನ್

ಅರೆಬಿಯನ್ ಮರುಭೂಮಿಯ ಅಂಚಿನಲ್ಲಿ, ಪೆಟ್ರಾವು ನಾಬಾಟಿಯನ್ ಸಾಮ್ರಾಜ್ಯದ ರಾಜ ಅರೆಟಾಸ್‌ IV ನ (9 ಕ್ರಿ.ಪೂ - 40 ಕ್ರಿ.ಶ.) ಮಿನುಗುವ ರಾಜಧಾನಿಯಾಗಿತ್ತು. ಜಲ ತಂತ್ರಜ್ಞಾನದ ಪ್ರವೀಣರಾದ, ನಾಬಾಟಿಯನರು ಶ್ರೇಷ್ಠ ಸುರಂಗ/ಕಾಲುವೆಗಳ ನಿರ್ಮಾಣಗಳ ಮತ್ತು ನೀರು ಕೋಣೆಗಳ ಮೂಲಕ ನಗರಕ್ಕೆ ಒದಗಿಸಿದ್ದರು. ಗ್ರೀಕ್-ರೋಮನ್ ಮಾದರಿಯಲ್ಲಿ ಒಂದು ರಂಗಭೂಮಿಯನ್ನು ವಿನ್ಯಾಸಗೊಳಿಸಲಾಗಿದೆ, ಅದು 4,000 ವೀಕ್ಷರರಿಗೆ ಸ್ಥಳವನ್ನು ಒದಗಿಸುತ್ತದೆ. ಇಂದು ಪೆಟ್ರಾದ ಎಲ್-ಡೆಯರ್ ಮೊನಸ್ಟೆರಿ ಮೇಲೆ ಮುಖಭಾಗದ 42 ಮೀಟರ್ ಎತ್ತರ ಹೆಲ್ಲೆನಿಸ್ಟಿಕ್ ದೇವಾಲಯ ಹೊಂದಿದ ಪ್ಯಾಲೇಸ್ ಟೊಂಬ್ಸ್ ಮಧ್ಯ ಪೂರ್ವದ ಸಂಸ್ಕೃತಿಯ ಹೃದಯಸ್ಪರ್ಶಿ ಉದಾಹರಣೆಗಳು.

6. ಮಹಾ ಗೋಡೆ 

ಚೀನಾದ ಮಹಾ ಗೋಡೆ (220 ಸಾ.ಶ.ಪೂ ಮತ್ತು 1368 - 1644 ಸಾ.ಶ) ಚೀನಾ

ಚೀನಾದ ಮಹಾ ಗೋಡೆಯನ್ನು ಅಸ್ತಿತ್ವದಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ಒಂದು ಸಂಯುಕ್ತ ರಕ್ಷಣಾ ವ್ಯವಸ್ಥೆಗೆ ಸಂಪರ್ಕಿಸಲು ಮತ್ತು ಆಕ್ರಮಣಮಾಡುವ ಮಂಘೋಲಿಯನ್ ಜನಾಂಗವನ್ನು ಚೀನಾದಿಂದ ಹೊರಗಿಡಲು ಕಟ್ಟಲಾಯಿತು. ಇದು ಇದುವರೆಗೂ ಕಟ್ಟಿರುವ ಅತ್ಯಂತ ದೊಡ್ಡ ಮಾನವ ನಿರ್ಮಿತ ಸ್ಮಾರಕವಾಗಿದೆ ಮತ್ತು ಇದು ಅಂತರಿಕ್ಷದಿಂದ ಕಾಣುವ ಏಕ ಮಾತ್ರ ಸಂರಚನೆಯಾಗಿದೆ ಎಂಬ ಬಗ್ಗೆ ಭಿನ್ನಭಿಪ್ರಾಯವಿದೆ. ಈ ಭಾರಿ ಗಾತ್ರದ ನಿರ್ಮಾಣವನ್ನು ಕಟ್ಟಿ ಮುಗಿಸಲು ಹಲವು ಸಾವಿರ ಜನರು ತಮ್ಮ ಜೀವನವನ್ನೆ ನೀಡಿರಬೇಕು.

7. ಮಾಚು ಪಿಚ್ಚು 

ಮಾಚು ಪಿಚ್ಚು (1460-1470), ಪೆರು 

15ನೆ ಶತಮಾನದಲ್ಲಿ ಇಂಕಾನ್ ಚಕ್ರವರ್ತಿ ಪಚಾಕ್ಯುಟೆಕ್ ಮಾಚು ಪಿಚ್ಚು ("ಪುರಾತನ ಪರ್ವತ") ಎಂಬ ಹೆಸರಿನ ಪರ್ವತದ ಮೇಲೆ ಮೋಡಗಳ ನಡುವೆ ಒಂದು ನಗರವನ್ನು ಕಟ್ಟಿದನು. ಈ ಅಸಾಮಾನ್ಯವಾದ ನಿವಾಸ ಸ್ಥಳವು ಅಮೆಜಾನ್‌ ಕಾಡಿನ ನಡುವೆ, ಅಂಡೆಸ್ ಪ್ರಸ್ಥಭೂಮಿ ಮಧ್ಯಬಾಗದಲ್ಲಿ ಮತ್ತು ಉರುಬಾಂಬ ನದಿಯ ಮೇಲ್ಭಾಗದಲ್ಲಿ ಹರಡಿದೆ. ಸಿಡಿಬು ರೋಗದ ತೀವ್ರತೆಯಿಂದ ಇದನ್ನು ಬಹುಶಃ ಇಂಕಾಸ್‌ ಗಳು ತೊರೆದಿರಬಹುದು.ಮತ್ತು, ಇಂಕಾನ್‌ ಸಾಮ್ರಾಜ್ಯವನ್ನು ಸ್ಪ್ಯಾನಿಷ್ ಸೋಲಿಸಿದ ನಂತರ, ನಗರವು ಸುಮಾರು ಮೂರು ಶತಮಾನಗಳ ವರೆಗೆ ’ಗೋಚರವಾಗದೆ’ಉಳಿದಿತ್ತು. ಇದನ್ನು 1911ರಲ್ಲಿ ಹಿರಾಮ್ ಬಿಂಗಹಂ ಮೂಲಕ ಪುನಃ ಶೋಧಿಸಲಾಯಿತು.

ಮೂಲ : ಕನ್ನಡ ವಿಕಾಸಪೀಡಿಯಾ (https://vikaspedia.in/)

Now Update Student Details in SATS | 2022

SATS ನಲ್ಲಿ ತಪ್ಪಾದ ವಿದ್ಯಾರ್ಥಿ ಹೆಸರು, ತಂದೆ ಹೆಸರು, ತಾಯಿ ಹೆಸರು ಮತ್ತು ರಾಷ್ಟ್ರೀಯತೆ ಮಾಹಿತಿಯನ್ನು Update ಮಾಡುವ ಅವಕಾಶ ಕಲ್ಪಿಸಲಾಗಿದ್ದು, ತಮ್ಮ ಶಾಲೆಯ ಮಕ್ಕಳ ಮೇಲೆ ತಿಳಿಸಿದ ಮಾಹಿತಿಗಳು ತಪ್ಪಾಗಿದ್ದರೆ Update ಮಾಡಬಹುದು.

Update ಅವಕಾಶವು ಕೆಲ ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ ಆದ ಕಾರಣ ಆದಷ್ಟು ಬೇಗ Update ಮಾಡಿಕೊಳ್ಳಿ.

Update ಮಾಡುವ ವಿಧಾನ ತಿಳಿಯಲು ಕೆಳಗಿನ ಈ ವಿಡಿಯೋ ನೋಡಿ.


ಮಾಹಿತಿ ಉಪಯುಕ್ತವೆನಿಸಿದರೆ Share  ಮಾಡಿ You Tube ಚೆನಲ್ ಗೆ Subscribe ಮಾಡಿ.

ಬಸವಣ್ಣನವರ ವಚನಗಳು | Basavanna Vachanagalu

 1
ಹೊತ್ತಾರೆ ಎದ್ದು ಅಘ್ಘವಣಿ ಪತ್ತರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತು ಗೆಲಸವ ಮಾಡು - ಕೂಡಲಸಂಗಮದೇವ ।।

2
ಅಯ್ಯಾ, ನೀ ಮಾಡಲಾದ ಜಗತ್ತು
ಅಯ್ಯಾ, ನೀ ಮಾಡಲಾದ ಸಂಸಾರ
ಅಯ್ಯಾ, ನೀ ಮಾಡಲಾದ ಮರವೆ
ಅಯ್ಯಾ, ನೀ ಮಾಡಲಾದ ದುಃಖ
ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ
ಅಯ್ಯಾ, ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ?
ಕೂಡಲ ಸಂಗಮದೇವ ।।

3
ನಾನೊಂದ ನೆನೆದಡೆ ತಾನೊಂದ ನೆನೆವುದು
ನಾನಿತ್ತಲೆಳೆದಡೆ ತಾನತ್ತಲೆಳೆವುದು
ತಾ ಬೇರೆ ಎನ್ನನಳಲಿಸಿ ಕಾಡಿತ್ತು
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ ।।

4
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವ ಬಲ್ಲಿರಿ ಕೂಡಲ ಸಂಗಮದೇವ ।।

5
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ
ತಾಳ ಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ ಕೂಡಲಸಂಗಮದೇವಾ ಕೇಳಯ್ಯಾ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ ।।

6
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲು ಬಾರದು
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲ ಸಂಗಮದೇವ ।।

7
ಮರವನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ ।।

8
ನೀನೊಲಿದಡೆ ಕೊರಡು ಕೊನರೂದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ
ನೀನೊಲಿದಡೆ ಸಕಲ ಪಡಿ ಪದಾರ್ಥ
ಇದಿರಲ್ಲಿರ್ಪುವು ಕೂಡಲ ಸಂಗಮದೇವ ।।

9
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮದೇವ ।।

10
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ
ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವನು ಕೂಡಲ ಸಂಗಮದೇವ ।।

11
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲ ಸಂಗಮದೇವ ।।

12
ನೀರಿಂಗೆ ನೈದಿಲೆಯೆ ಶೃಂಗಾರ
ಸಮುದ್ರಕ್ಕೆ ತೆರೆಯೆ ಶೃಂಗಾರ
ನಾರಿಗೆ ಗುಣವ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ ।।

13
ತಾಳ ಮರದ ಕೆಳಗೆ
ಒಂದು ಹಾಲ ಹರವಿಯಿದ್ದಡೆ
ಅದ ಹಾಲ ಹರವಿಯನ್ನರು
ಸುರೆಯ ಹರವಿಯೆಂಬರು
ಈ ಭಾವನಿಂದೆಯ ಮಾಣಿಸಾ
ಕೂಡಲ ಸಂಗಮದೇವ ।।

14
ದಯವಿಲ್ಲದ ಧರ್ಮವದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ ।।

15
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು
ನೆನೆದು ಮೃದುವಾಗಬಲ್ಲುದೆ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ್ಕ ?
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲ ಸಂಗಮದೇವ ।।

16
ಅಂಗದಿಚ್ಚೆಗೆ ಮದ್ಯ ಮಾಂಸವ ತಿಂಬರು
ಕಂಗಳಿಚ್ಛೆಗೆ ಪರವಧುವ ನೆರೆವರು
ಲಿಂಗ ಲಾಂಛನಧಾರಿಯಾದಲ್ಲಿ ಫಲವೇನು
ಲಿಂಗ ಪಥವ ತಪ್ಪಿ ನಡೆದವರು ?
ಜಂಗಮ ಮುಖದಿಂದ ನಿಂದೆ ಬಂದದೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲ ಸಂಗಮದೇವ ।।

17
ಅವಳ ವಚನ ಬೆಲ್ಲದಂತೆ
ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲೋಬ್ಬನ ಕರೆವಳು
ಮನದಲ್ಲೊಬ್ಬನ ನೆರೆವಳು
ಕೂಡಲ ಸಂಗಮದೇವ ಕೇಳಯ್ಯಾ
ಮಾನಿಸಗಳ್ಳಿಯ ನಂಬದಿರಯ್ಯಾ ।।

18
ಬಚ್ಚಲ ನೀರು ತಿಳಿದಡೇನು ?
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು ?
ಆಕಾಶದ ಮಾವಿನ ಫಲವೆಂದಡೇನು ?
ಕೊಯ್ಯಲಿಲ್ಲ, ಮೆಲ್ಲಲಿಲ್ಲ
ಕೂಡಲ ಸಂಗನ ಶರಣರ ಅನುಭವವಿಲ್ಲದವ
ಎಲ್ಲಿದ್ದಡೇನು ಎಂತಾದಡೇನು? ।।

19
ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ ಕೂಡಲ ಸಂಗಮದೇವ।।

20
ಅತ್ತಲಿತ್ತ ಹೋಗದಂತೆ
ಹೆಳವನ ಮಾಡಯ್ಯಾ ತಂದೆ ।
ಸುತ್ತಿ ಸುಳಿದು ನೋಡದಂತೆ
ಅಂಧಕನ ಮಾಡಯ್ಯಾ ತಂದೆ ।
ಮತ್ತೊಂದ ಕೇಳದಂತೆ
ಕಿವುಡನ ಮಾಡಯ್ಯಾ ತಂದೆ ।
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳೆಸದಂತೆ ಇರಿಸು
ಕೂಡಲ ಸಂಗಮದೇವ ।।  

21
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು
ಕೊಂದವರುಳಿದರೆ ಕೂಡಲಸಂಗಮದೇವ ।।

22
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕಪ್ರಸಾದ
ಹೆಂಡತಿ ಕೊಂಬುದು ಸುರೆಮಾಂಸ
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ ।।

23
ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ ।।

24
ಕರಿಯಂಜುವುದು ಅಂಕುಶಕ್ಕಯ್ಯ
ಗಿರಿಯಂಜುವುದು ಕುಲಿಶಕ್ಕಯ್ಯ
ತಮಂಧವಂಜುವುದು ಜ್ಯೋತಿಗಯ್ಯ
ಕಾನನವಂಜುವುದು ಬೇಗೆಗಯ್ಯ
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ ।।

25
ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು.
ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು.
ಮರಳಿ ಮರಳಿ ಮುಸುಕುವುದು ಮಾಣದಯ್ಯ.
ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-
ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು
ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ ।।

26
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು ।।

27
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು
ಇನ್ನೆಂದಿಂಗೆ ಮೋಕ್ಷವಹುದೋ ಕೂಡಲಸಂಗಮದೇವ ।।

28
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ
‘ಓಂ ನಮಶ್ಶಿವಾಯ’ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ ।।

29
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ ।।

30
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ ।।

31
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ ।।

32
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ಕೂಡಲಸಂಗಮದೇವ ।।