Menu

Home ನಲಿಕಲಿ About ☰ Menu


 

🔍

ಓ ನನ್ನ ದೇಶ ಬಾಂಧವರೇ....

ಓ ನನ್ನ ದೇಶ ಬಾಂಧವರೇ
ಕಣ್ಣೀರ ಕಥೆಯಿದು ಕೇಳಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ||೨ಸಲ||

ಹಿಮಾಲಯವೂ ಭುಗಿಲೇಳಲು
ಸ್ವಾತಂತ್ರ್ಯಕ್ಕೆ ಭಯವಾ ತರಲು
ಕೊನೆವರೆಗೂ ಹೋರಾಡುತಲಿ
ಕೊನೆವರೆಗೂ ಹೋರಾಡುತಲಿ
ಹೆಣವಾಗಿ ಉರುಳಿದರಲ್ಲಿ
ಭೂ ತಾಯಿಯ ಋಣ ತೀರಿಸುತ
ಕಣ್ಮುಚ್ಚಿ ಅಮರರೂ ಆಗಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ

ದೇಶ ಆಚರಿಸಲು ದೀಪಾವಳಿ
ಗಡಿಯಾಚೆ ರಕ್ತದ ಓಕುಳಿ
ಮನೆಯಲ್ಲ ಸಂತಸವಿರಲು
ಮನೆಯೆಲ್ಲ ನಲಿಯುತಲಿರಲು
ಅಲ್ಲವರಿಗೆ ಮರಣದ ತೊಟ್ಟಿಲು
ವೀರ ಮರಣ ವಪ್ಪಿದ ಸೈನ್ಯಕೆ
ಅಶ್ರು ತರ್ಪಣ ನೀಡಿ ಜನರೇ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ


ಕುಲ ಜಾತಿಗಳೆಲ್ಲವೂ ಮರೆತು
ಭಾಷೆ ಪ್ರಾಂತ್ಯದ ಭೇದವ ತೊರೆದು
ಕುಲ ಜಾತಿಗಳೆಲ್ಲವೂ ಮರೆತು
ಭಾಷೆ ಪ್ರಾಂತ್ಯದ ಭೇದವ ತೊರೆದು
ಗಡಿ ನೆಲದೀ ಮಡಿದವರೆಲ್ಲಾ..
ಗಡಿ ನೆಲದೀ ಮಡಿದವರೆಲ್ಲಾ..
ವೀರ ಧೀರ ಭಾರತ ವಾಸಿ

ಮಳೆ ಗರಿಯುತ ರಕ್ತವು ಸಿಡಿದು,

ಸಾರಿ ಹೇಳಿತು ಭಾರತೀಯರೆಂದು
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ


ಗಾಯ ರಕ್ತವು ಆವರಿಸಿದರು
ವೈರಿ ಮುಗಿಸಲು ಮುಂದೂಡಿದರು
ಎದುರಾದ ವೈರಿಯ ಮುಗಿಸಿ
ತಾಯಿ ಮಡಿಲಲಿ ಬಸವಳಿದಿರಲು
ಕೊನೆ ಉಸಿರು ತಡೆಯಿಡಿದಿರಲೂ...

ಕೊನೆ ಉಸಿರು ತಡೆಯಿಡಿದಿರಲು,
ಕೂಗಿ ಹೇಳಿದರು ಮಾತೊಂದ
ಕೊನೆ ಉಸಿರು ತಡೆಯಿಡಿದಿರಲು,
ಕೂಗಿ ಹೇಳಿದರು ಮಾತೊಂದ,

ಸುಖವಾಗಿರಿ ದೇಶದ ಜನರೇ..
ಸುಖವಾಗಿರಿ ನಾಡಿನ ಜನರೇ..
ಎಂದು ಹೇಳುತ ಕಣ್ಮುಚ್ಚಿದರು..
ಎಂದು ಹೇಳುತ ಕಣ್ಮುಚ್ಚಿದರು..

ಮರೆಯಾದರು ಮನದಲಿ ಉಳಿದು

ಬಲಿದಾನ ತ್ಯಾಗವ ಮೆರೆದು

ಈ ದೇಶಕಾಗಿ ಮಾಡಿದಾ
ವೀರ ಯೋಧರಾ ಕಥೆ ಕೇಳಿ
ಓ ನನ್ನ ದೇಶ ಬಾಂಧವರೇ
ಕಣ್ಣೀರ ಕಥೆಯಿದು ಕೇಳಿ
ಈ ದೇಶಕಾಗಿ ಮಡಿದಾ
ವೀರ ಯೋಧರಾ ಕಥೆ ಕೇಳಿ

ಜಯ ಭಾರತ, ಜಯ ಭಾರತ ಸೇನಾ

ಜಯ ಭಾರತ, ಜಯ ಭಾರತ ಸೇನಾ
ಜಯ ಭಾರತ, ಜಯ ಭಾರತ, ಜಯ ಭಾರತ.
                ----------೦----------

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post