ಈ ಬ್ಲಾಗ್ ಅನ್ನು ಹುಡುಕಿ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಶೀಘ್ರದಲ್ಲಿ ಆರಂಭ‌‌ : ಸಂಪೂರ್ಣ ವಿವರ.

               ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಸಮುದಾಯದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಪ್ರಮಾಣದ ಸಮೀಕ್ಷೆಯನ್ನು ನಡೆಸಲಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ  ಶಿಘ್ರದಲ್ಲಿ  ಆರಂಭ‌‌ : ಸಂಪೂರ್ಣ ವಿವರ.

ಈ ಸಮೀಕ್ಷೆ ಏತಕ್ಕಾಗಿ ನಡೆಯಲಿದೆ?:
                ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆಗಸ್ಟ್, 01 ರಂದು ತೀರ್ಪು ನೀಡಿದೆ.

                 ಈ ಸಮೀಕ್ಷೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ನಡೆಸಲಿದೆ. ಇದರಲ್ಲಿ ಸುಮಾರು 70,000 ಶಿಕ್ಷಕರು ಭಾಗವಹಿಸಲಿದ್ದಾರೆ.

ಸಮೀಕ್ಷೆಯ ಮುಖ್ಯ ಅಂಶಗಳು:

  1.  ಸಮಯಾವಧಿ: ಮೇ 5 ರಿಂದ 17 ರವರೆಗೆ (12 ದಿನಗಳ ಕಾಲ)
  2.  ಗಣತಿದಾರರು: ಪ್ರತಿ ಮತದಾನ ಕೇಂದ್ರಕ್ಕೆ (ಬೂತ್) ಒಬ್ಬ ಶಿಕ್ಷಕ ನಿಯೋಜಿತರಾಗುತ್ತಾರೆ.
  3. ಆನ್ಲೈನ್ ಸಮೀಕ್ಷೆ: ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹ.
  4. ಮೇಲ್ವಿಚಾರಣೆ: ಪ್ರತಿ 10-12 ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ.

ಸಮೀಕ್ಷೆಯ ವಿವರಗಳು
I. ಶಿಕ್ಷಕರ ಪಾತ್ರ
  • 58,932 ಶಿಕ್ಷಕರು ಪ್ರಾಥಮಿಕ ಗಣತಿದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
  • 10% ಹೆಚ್ಚುವರಿ ಶಿಕ್ಷಕರು (ಸುಮಾರು 5,900) ರಿಜರ್ವ್‌ಗೆ ಇರಲಿದ್ದಾರೆ.
  • 5,000 ಮೇಲ್ವಿಚಾರಕರು (ಶಾಲಾ ಮುಖ್ಯೋಪಾಧ್ಯಾಯರು) ನಿಯೋಜಿತರಾಗುತ್ತಾರೆ.
II. ಸಮೀಕ್ಷೆ ಹೇಗೆ ನಡೆಯುತ್ತದೆ?
  • ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಪ್ರಶ್ನೆಯನ್ನು ಕೇಳುತ್ತಾರೆ.
  • ಆನ್ಲೈನ್ ಡೇಟಾ ಎಂಟ್ರಿ: ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ನಮೂದಿಸಲಾಗುತ್ತದೆ.
  • ಪ್ರತಿ ಮತಗಟ್ಟೆಗೆ ಒಬ್ಬ ಶಿಕ್ಷಕ ನೇಮಕವಾಗುತ್ತಾರೆ.
III. ಸಾರ್ವಜನಿಕರ ಸಹಕಾರ
  • ಜಿಲ್ಲಾಧಿಕಾರಿಗಳು ನಾಗರಿಕರನ್ನು ಸಮೀಕ್ಷೆಗೆ ಸಹಕರಿಸಲು ಮನವಿ ಮಾಡಿದ್ದಾರೆ.
  • ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ಮೂಲ, ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಸ್ಥಿತಿ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು.
ಸಮೀಕ್ಷೆಯ ಉದ್ದೇಶ ಮತ್ತು ಪ್ರಾಮುಖ್ಯತೆ
  • ಪರಿಶಿಷ್ಟ ಜಾತಿಗಳ ನಿಜವಾದ ಜನಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿ ಅರ್ಥಮಾಡಿಕೊಳ್ಳಲು.
  • ಸರ್ಕಾರಿ ಯೋಜನೆಗಳು ಯೋಗ್ಯರಿಗೆ ತಲುಪುವಂತೆ ಮಾಡಲು.
  • ಮೀಸಲಾತಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು.

# ಕೆಳಗಿನ Link ಮೂಲಕ ಈ ಸಮೀಕ್ಷೆಗೆ ಸಂಬಂಧಿಸಿದ ಕೈಪಿಡಿ Download ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.