ಜ್ಞಾನಪೀಠ ಪ್ರಶಸ್ತಿ | Jnanapeeta Prashasti
ಜ್ಞಾನಪೀಠ ಭಾರತದ ಸಾಹಿತಿಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇದನ್ನು 'ಟೈಮ್ಸ್ ಆಫ್ ಇಂಡಿಯಾ'ದ ಪ್ರಕಾಶಕರಾದ ಸಾಹು ಜೈನ್ ಕುಟುಂಬದವರು 1961 ಮೇ 22 ರಂದು ಸ್ಥಾಪನೆ ಮಾಡಿದರು. ಈ ಪ್ರಶಸ್ತಿಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಇರುವ 22 ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ನೀಡಲಾಗುವುದು, ಆದರೆ ಈ ಪ್ರಶಸ್ತಿಯನ್ನು ಸರ್ಕಾರ ನೀಡುವುದಿಲ್ಲ. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯನ್ನು ಮೊದಲಿಗೆ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ನೀಡಿ ಗೌರವಿಸಲಾಯಿತು. ಇಲ್ಲಿಯವರೆಗೆ ಹಿಂದಿ 11 ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದ್ದು, ಕನ್ನಡಕ್ಕೆ 8 ಪ್ರಶಸ್ತಿ ದೊರೆತಿದ್ದು ಎರಡನೆ ಸ್ಥಾನದಲ್ಲಿದೆ.
ಜ್ಞಾನಪೀಠ ಪ್ರಶಸ್ತಿಯ ನಿಯಮಗಳು:
*ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವವನು ಭಾರತೀಯನೇ ಆಗಿರಬೇಕು.
* ಆತನು ತನಗೆ ಸಂಬಂಧಿಸಿದ ಭಾಷೆಯ ಬಗ್ಗೆ ಸಾಕಷ್ಟು ಪಾಂಡಿತ್ಯವನ್ನು, ಪರಿಣಿತಿಯನ್ನು ಪಡೆದಿರಬೇಕು.
*ಪ್ರಶಸ್ತಿ ನೀಡುವ ಸಮಯದಲ್ಲಿ ಆತನು ಜೀವಂತನಾಗಿರಬೇಕು.
* ಒಂದು ಬಾರಿ ಪ್ರಶಸ್ತಿ ಪಡೆದ ಪುರಸ್ಕೃತನಿಗೆ ಯಾವುದೇ ಕಾರಣಗಳಿಂದ ಮತ್ತೊಮ್ಮೆ ಪ್ರಶಸ್ತಿ ನೀಡಲಾಗದು.
* ಒಂದು ಬಾರಿ ಯಾವುದಾದ್ರೂ ಒಂದು ಭಾಷೆಗೆ ಪ್ರಶಸ್ತಿ ಬಂದರೆ ನಂತರ ಮೂರು ವರ್ಷಗಳ ಕಾಲ ಆದೇ ಭಾಷೆಯ ಯಾವ ಸಾಹಿತಿಗೂ ಪುರಸ್ಕಾರ ಲಭ್ಯವಾಗದು.
ಸೂಚನೆ: 1982 ನೇ ವರ್ಷದಿಂದ ಸಾಹಿತಿಗಳು ಸಮಗ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ
ವರ್ಷ - ಪುರಸ್ಕೃತರು - ಭಾಷೆ
ಕೃತಿಗಳು
1965 - ಜಿ. ಶಂಕರ ಕುರುಪ್ - ಮಲಯಾಳಂ ಓಡಕ್ಕುಳಲ್
1966 - ತಾರಾಶಂಕರ ಬಂದೋಪಾಧ್ಯಾಯ- ಬೆಂಗಾಲಿ ಗಣದೇವತಾ
1967 - ಉಮಾಶಂಕರ್ ಜೋಶಿ - ಗುಜರಾತಿ ನಿಶಿತಾ
1967 - ಕುವೆಂಪು - ಕನ್ನಡ ಶ್ರೀ ರಾಮಾಯಣ ದರ್ಶನಂ
1968 - ಸುಮಿತ್ರಾನಂದನ ಪಂತ್ - ಹಿಂದಿ ಚಿದಂಬರಾ
1969 - ಫಿರಾಕ್ ಗೋರಕ್ ಪುರಿ - ಉರ್ದು ಗುಲ್-ಎ-ನಗ್ಮಾ
1970 - ವಿಶ್ವನಾಥ ಸತ್ಯನಾರಾಯಣ - ತೆಲುಗು ರಾಮಾಯಣ ಕಲ್ಪವೃಕ್ಷಮು
1971 - ಬಿಷ್ಣು ಡೆ - ಬೆಂಗಾಲಿ ಸ್ಮೃತಿ ಸತ್ತಾ ಭವಿಷ್ಯತ್
1972 - ರಾಮ್ಧಾರಿ ಸಿಂಗ್ ದಿನಕರ್ - ಹಿಂದಿ ಊರ್ವಶಿ
1973 - ದ. ರಾ. ಬೇಂದ್ರೆ - ಕನ್ನಡ ನಾಕುತಂತಿ
1973 - ಗೋಪಿನಾಥ ಮೊಹಾಂತಿ - ಒಡಿಯಾ ಮತಿಮತಾಲ್
1974 - ವಿ. ಎಸ್. ಖಾಂಡೇಕರ್ - ಮರಾಠಿ ಯಯಾತಿ
1975 - ಪಿ. ವಿ. ಅಖಿಲನ್ - ತಮಿಳು ಚಿತ್ರಪ್ಪಾವೈ
1976 - ಆಶಾಪೂರ್ಣ ದೇವಿ - ಬೆಂಗಾಲಿ ಪ್ರಥಮ್ ಪ್ರತಿಶೃತಿ
1977 - ಕೆ. ಶಿವರಾಮ ಕಾರಂತ - ಕನ್ನಡ ಮೂಕಜ್ಜಿಯ ಕನಸುಗಳು
1978 - ಸಚ್ಚಿದಾನಂದ ವಾತ್ಸಾಯನ - ಹಿಂದಿ ಕಿತ್ನೀ ನಾವೋಂ ಮೇಂಕಿತ್ನೀ
1979 - ಬೀರೇಂದ್ರ ಕುಮಾರ್ ಭಟ್ಟಾಚಾರ್ಯ - ಅಸ್ಸಾಮಿ ಮೃತ್ಯುಂಜಯ್
1980 - ಎಸ್. ಕೆ. ಪೊಟ್ಟೆಕ್ಕಾಟ್ - ಮಲಯಾಳಂ ಒರು ದೇಸದಿಂಟೆ ಕಥಾ
1981 - ಅಮೃತಾ ಪ್ರೀತಮ್ - ಪಂಜಾಬಿ ಕಾಗಜ್ ತೆ ಕ್ಯಾನ್ವಾಸ್
1982 - ಮಹಾದೇವಿ ವರ್ಮಾ - ಹಿಂದಿ ಸಮಗ್ರ ಸಾಹಿತ್ಯ
1983 - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಕನ್ನಡ ಚಿಕ್ಕವೀರ ರಾಜೇಂದ್ರ
1984 - ತಕಳಿ ಶಿವಶಂಕರ ಪಿಳ್ಳೈ - ಮಲಯಾಳಂ
1985 - ಪನ್ನಾಲಾಲ್ ಪಟೇಲ್ - ಗುಜರಾತಿ
1986 - ಸಚ್ಚಿದಾನಂದ ರಾವುತರಾಯ್ - ಒಡಿಯಾ
1987 - ವಿ. ವಿ. ಶಿರ್ವಾಡ್ಕರ್ - ಮರಾಠಿ
1988 - ಸಿ. ನಾರಾಯಣ ರೆಡ್ಡಿ - ತೆಲುಗು
1989 - ಕುರ್ರಾತುಲೈನ್ ಹೈದರ್ - ಉರ್ದು
1990 - ವಿ. ಕೃ. ಗೋಕಾಕ - ಕನ್ನಡ
1991 - ಸುಭಾಷ್ ಮುಖ್ಯೋಪಾಧ್ಯಾಯ - ಬೆಂಗಾಲಿ
1992 - ನರೇಶ್ ಮೆಹ್ತಾ - ಹಿಂದಿ
1993 - ಸೀತಾಕಾಂತ್ ಮಹಾಪಾತ್ರ - ಒಡಿಯಾ
1994 - ಯು. ಆರ್. ಅನಂತಮೂರ್ತಿ - ಕನ್ನಡ
1995 -ಎಂ. ಟಿ. ವಾಸುದೇವನ್ ನಾಯರ್- ಮಲಯಾಳಂ
1996 - ಮಹಾಶ್ವೇತಾ ದೇವಿ - ಬೆಂಗಾಲಿ
1997 - ಅಲಿ ಸರ್ದಾರ್ ಜಾಫ್ರಿ - ಉರ್ದು
1998 - ಗಿರೀಶ್ ಕಾರ್ನಾಡ್ - ಕನ್ನಡ
1999 - ನಿರ್ಮಲ್ ವರ್ಮ - ಹಿಂದಿ
1999 - ಗುರುದಯಾಳ್ ಸಿಂಗ್ - ಪಂಜಾಬಿ
2000 - ಇಂದಿರಾ ಗೋಸ್ವಾಮಿ - ಅಸ್ಸಾಮಿ
2001 - ರಾಜೇಂದ್ರ ಕೆ. ಶಾ - ಗುಜರಾತಿ
2002 - ಡಿ. ಜಯಕಾಂತನ್ - ತಮಿಳು
2003 - ವಿಂದಾ ಕರಂದೀಕರ್ - ಮರಾಠಿ
2004 - ರೆಹಮಾನ್ ರಾಹಿ - ಕಾಶ್ಮೀರಿ
2005 - ಕುನ್ವರ್ ನಾರಾಯಣ್ - ಹಿಂದಿ
2006 - ರವೀಂದ್ರ ಕೇಳೇಕರ್ - ಕೊಂಕಣಿ
2006 - ಸತ್ಯವ್ರತ ಶಾಸ್ತ್ರಿ - ಸಂಸ್ಕೃತ
2007 - ಒ. ಎನ್. ವಿ. ಕುರುಪ್ - ಮಲಯಾಳಂ
2008 -ಅಖ್ಲಾಕ್ ಮೊಹಮ್ಮದ್ ಶಹರ್ಯಾರ್ - ಉರ್ದು
2009 - ಅಮರ್ ಕಾಂತ್ - ಹಿಂದಿ
2009 - ಶ್ರೀ ಲಾಲ್ ಶುಕ್ಲ - ಹಿಂದಿ
2010 - ಚಂದ್ರಶೇಖರ ಕಂಬಾರ - ಕನ್ನಡ
2011 - ಪ್ರತಿಭಾ ರೇ - ಒಡಿಯಾ
2012 - ರಾವೂರಿ ಭರದ್ವಾಜ - ತೆಲುಗು
2013 - ಕೇದಾರನಾಥ್ ಸಿಂಗ್ - ಹಿಂದಿ
2014 - ಭಾಲಚಂದ್ರ ನೇಮಾಡೆ - ಮರಾಠಿ.
2015 - ರಘುವೀರ್ ಚೌಧರಿ - ಗುಜರಾತಿ.
2016 - ಶಂಖ ಘೋಷ್ - ಬೆಂಗಾಲಿ
2017 - ಕೃಷ್ಣಾ ಸೋಬ್ತಿ - ಹಿಂದಿ
2018 - ಅಮಿತಾವ್ ಘೋಷ್ - ಇಂಗ್ಲಿಷ್
2019 - ಅಕ್ಕಿತಂ ಅಚ್ಯುತನ್ ನಂಬೂದಿರಿ - ಮಲಯಾಳಂ
2020 - ನೀಲಮಣಿ ಫೂಕನ್ - ಅಸ್ಸಾಮಿ 2021 - ದಾಮೋದರ ಮೌಜೋ - ಕೊಂಕಣಿ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.