ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ ನಮ್ಮ ಪರಂಪರೆಯ ಪ್ರಮುಖ ಅಂಶಗಳು

   ನಮ್ಮ ಸಂಸ್ಕೃತಿ-ಪರಂಪರೆಯ ಪ್ರಮುಖ ಅಂಶಗಳನ್ನು ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿ ಕೊಳ್ಳೋಣ.

ನಾವು ಓದಿ ತಿಳಿದು ಮಕ್ಕಳಿಗೆ ತಿಳಿಸಬೇಕಾದ  ನಮ್ಮ ಪರಂಪರೆಯ ಪ್ರಮುಖ ಅಂಶಗಳು

ದಿಕ್ಕುಗಳು:-

1. ಪೂರ್ವ /ಮೂಡಣ

2. ದಕ್ಷಿಣ.  /ತೆಂಕಣ

3. ಪಶ್ಚಿಮ /ಪಡುವಣ

4. ಉತ್ತರ /ಬಡಗಣ


ಮೂಲೆಗಳು:-

1. ಆಗ್ನೇಯ 

2. ನೈರುತ್ಯ 

3. ವಾಯುವ್ಯ 

4. ಈಶಾನ್ಯ 


ವೇದಗಳು:-

1. ಋಗ್ವೇದ 

2. ಯಜುರ್ವೇದ 

3. ಸಾಮವೇದ 

4. ಅಥರ್ವಣ ವೇದ 


ಪುರುಷಾರ್ಥಗಳು:-

1. ಧರ್ಮ 

2. ಅರ್ಥ 

3. ಕಾಮ 

4. ಮೋಕ್ಷ 


ಪಂಚಭೂತಗಳು:-

1. ಗಾಳಿ 

2. ನೀರು 

3. ಭೂಮಿ 

4. ಆಕಾಶ 

5. ಅಗ್ನಿ 


ಪಂಚೇಂದ್ರಿಯಗಳು:-

1. ಕಣ್ಣು 

2. ಮೂಗು 

3. ಕಿವಿ 

4. ನಾಲಿಗೆ 

5. ಚರ್ಮ 


ಲಲಿತ ಕಲೆಗಳು:-

1. ಕವಿತ್ವ 

2. ಚಿತ್ರಲೇಖನ 

3. ನಾಟ್ಯ 

4. ಸಂಗೀತ 

5. ಶಿಲ್ಪ ಕಲೆ 


ಪಂಚಗಂಗೆಯರು:-

1. ಗಂಗಾ 

2. ಕೃಷ್ನಾ

3. ಗೋದಾವರಿ 

4. ಕಾವೇರಿ 

5. ತುಂಗಭದ್ರಾ 


ದೇವತಾ ವೃಕ್ಷಗಳು: -

1. ಮಂದಾರ 

2. ಪಾರಿಜಾತ 

3. ಕಲ್ಪವೃಕ್ಷ 

4. ಸಂತಾನ 

5. ಹರಿ ಚಂದನ 


ಪಂಚೋಪಚಾರಗಳು:-

1. ಸ್ನಾನ 

2. ಪೂಜೆ 

3. ನೈವೇದ್ಯ 

4. ಪ್ರದಕ್ಷಿಣೆ 

5. ನಮಸ್ಕಾರ 


ಪಂಚಾಮೃತಗಳು:-

1. ಹಸುವಿನ ಹಾಲು 

2. ಮೊಸರು 

3. ತುಪ್ಪ 

4. ಸಕ್ಕರೆ 

5. ಜೇನುತುಪ್ಪ 


ಪಂಚಲೋಹಗಳು:- 

1. ಚಿನ್ನ 

2. ಬೆಳ್ಳಿ 

3. ತಾಮ್ರ 

4. ಸೀಸ 

5. ತವರ 


ಪಂಚರಾಮರು:-

1. ಅಮರಾವತಿ 

2. ಭೀಮವರಂ 

3. ಪಾಲಕೊಲ್ಲು 

4. ಸಾಮರ್ಲಕೋಟ

5. ದ್ರಾಕ್ಷಾರಾಮಂ 


ಷಡ್ರುಚಿಗಳು:-

1. ಸಿಹಿ 

2. ಹುಳಿ 

3. ಕಹಿ 

4. ಒಗರು 

5. ಕಾರ 

6. ಉಪ್ಪು 


ಅರಿಷಡ್ವರ್ಗಗಳು:-

1. ಕಾಮ 

2. ಕ್ರೋಧ 

3. ಲೋಭ 

4. ಮೋಹ 

5. ಮದ

6. ಮತ್ಸರ 


ಋತುಗಳು:-

1. ವಸಂತ 

2. ಗ್ರೀಷ್ಮ 

3. ವರ್ಷ 

4. ಶರತ್ 

5. ಹೇಮಂತ 

6. ಶಿಶಿರ 


ಸಪ್ತ ಋಷಿಗಳು:-

1. ಕಾಶ್ಯಪ 

2. ಗೌತಮ 

3. ಅತ್ರಿ 

4. ವಿಶ್ವಾಮಿತ್ರ 

5. ಭಾರದ್ವಾಜ 

6. ವಸಿಷ್ಠ 

7. ⁠ಜಮದಗ್ನಿ 


ತಿರುಪತಿಯಲ್ಲಿನ ಸಪ್ತಗಿರಿಗಳು:- 

1. ಶೇಷಾದ್ರಿ 

2. ನೀಲಾದ್ರಿ 

3. ಗರುಡಾದ್ರಿ

4. ಅಂಜನಾದ್ರಿ 

5. ವೃಷಭಾದ್ರಿ

6. ನಾರಾಯಣದ್ರಿ 

7. ವೇಂಕಟಾದ್ರಿ 


ಸಪ್ತ ವ್ಯಸನಗಳು:-

1. ಜೂಜು 

2. ಮದ್ಯಪಾನ 

3. ಕಳ್ಳತನ 

4. ಬೇಟೆ 

5. ವ್ಯಭಿಚಾರ 

6. ದುಂದು ಖರ್ಚು 

7. ಕಠಿಣ ಮಾತು 


ಸಪ್ತ ನದಿಗಳು:-

1. ಗಂಗಾ 

2. ಯಮುನಾ 

3. ಸರಸ್ವತಿ 

4. ಗೋದಾವರಿ 

5. ಸಿಂಧು 

6. ನರ್ಮದಾ 

7. ಕಾವೇರಿ 


ನವ ಧಾನ್ಯಗಳು:- 

1. ಗೋಧಿ 

2. ಭತ್ತ/ನೆಲ್ಲು 

3. ಹೆಸರು 

4. ಕಡಲೆ 

5. ತೊಗರಿ 

6. ನವಣೆ 

7. ಉದ್ದು 

8. ಹುರಳಿ 

9. ಅಲಸಂದೆ 


ನವರತ್ನಗಳು:-

1. ಮುತ್ತು

2. ಹವಳ

3. ಗೋಮೇಧಿಕ

4. ವಜ್ರ 

5. ಕೆಂಪು 

6. ನೀಲಿ 

7. ಕನಕ ಪುಷ್ಯ ರಾಗ 

8. ಪಚ್ಚೆ/ಮರಕತ

9. ವೈಡೂರ್ಯ


ನವ ಧಾತುಗಳು:-

1. ಚಿನ್ನ

2. ಬೆಳ್ಳಿ 

3. ಹಿತ್ತಾಳೆ 

4. ತಾಮ್ರ 

5. ಕಬ್ಬಿಣ 

6. ಕಂಚು 

7. ಸೀಸ

8. ತವರ 

9. ಕಾಂತ ಲೋಹ


ನವರಸಗಳು:-

1. ಹಾಸ್ಯ 

2. ಶೃಂಗಾರ 

3. ಕರುಣ 

4. ಶಾಂತ 

5. ರೌದ್ರ 

6. ಭಯಾನಕ 

7. ಬೀಭತ್ಸ

8. ಅದ್ಭುತ 

9. ವೀರ 


ನವದುರ್ಗೆಯರು:-

1. ಶೈಲ ಪುತ್ರಿ 

2. ಬ್ರಹ್ಮಚಾರಿಣಿ

3. ಚಂದ್ರ ಘಂಟ 

4. ಕೂಷ್ಮಾಂಡ 

5. ಸ್ಕಂದ ಮಾತೆ 

6. ಕಾತ್ಯಾಯನಿ

7. ಕಾಳರಾತ್ರಿ 

8. ಮಹಾಗೌರಿ

9. ಸಿದ್ಧಿದಾತ್ರಿ


ದಶ ಸಂಸ್ಕಾರಗಳು:-

1. ವಿವಾಹ 

2. ಗರ್ಭದಾನ

3. ಪುಂಸವನ

4. ಸೀಮಂತ

5. ಜಾತಕ ಕರ್ಮ 

6. ನಾಮಕರಣ 

7. ಅನ್ನಪ್ರಾಶನ

8. ಚೂಡಕರ್ಮ

9. ಉಪನಯನ 

10. ಸಮವರ್ತನ 


ದಶಾವತಾರಗಳು - ಕ್ಷೇತ್ರಗಳು 

1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ. 

2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.

3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.

4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.

5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.

6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.

7. ಶ್ರೀರಾಮ ಕ್ಷೇತ್ರ -  ಅಯೋಧ್ಯ, ಉತ್ತರ ಪ್ರದೇಶ.

8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ. 

9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.

10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).


ಜ್ಯೋತಿರ್ಲಿಂಗಗಳು:-

1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ 

2. ಕಾಶಿ - ಕಾಶಿ ವಿಶ್ವೇಶ್ವರ 

3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ 

4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ. 

5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.

6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )

7. ತಮಿಳುನಾಡು - ರಾಮಲಿಂಗೇಶ್ವರ


ವಾರಗಳು:-

1. ಭಾನು 

2. ಸೋಮ 

3. ಮಂಗಳ 

4. ಬುಧ 

5. ಗುರು 

6. ಶುಕ್ರ 

7. ಶನಿ 


ಚಂದ್ರಮಾನ ತಿಂಗಳುಗಳು:-

1. ಚೈತ್ರ 

2. ವೈಶಾಖ 

3. ಜೇಷ್ಠ 

4. ಆಷಾಢ 

5. ಶ್ರಾವಣ 

6. ಭಾದ್ರಪದ 

7. ಆಶ್ವಯುಜ 

8. ಕಾರ್ತೀಕ 

9. ಮಾರ್ಗಶಿರ 

10. ಪುಷ್ಯ

11. ಮಾಘ

12. ಫಾಲ್ಗುಣ


ರಾಶಿಗಳು:-

1. ಮೇಷ 

2. ವೃಷಭ 

3. ಮಿಥುನ 

4. ಕರ್ಕಾಟಕ 

5. ಸಿಂಹ 

6. ಕನ್ಯಾ 

7. ತುಲಾ 

8. ವೃಶ್ಚಿಕ 

9. ಧನಸ್ಸು 

10. ಮಕರ 

11. ಕುಂಭ 

12. ಮೀನ


ತಿಥಿಗಳು: -

1. ಪಾಡ್ಯ 

2. ಬಿದಿಗೆ 

3. ತದಿಗೆ 

4. ಚೌತಿ 

5. ಪಂಚಮಿ 

6. ಷಷ್ಠಿ 

7. ಸಪ್ತಮಿ 

8. ಅಷ್ಟಮಿ 

9. ನವಮಿ 

10. ದಶಮಿ 

11. ಏಕಾದಶಿ 

12. ದ್ವಾದಶಿ 

13. ತ್ರಯೋದಶಿ 

14. ಚತುರ್ದಶಿ 

15. ಅಮಾವಾಸ್ಯೆ/ಹುಣ್ಣಿಮೆ


ನಕ್ಷತ್ರಗಳು:-

1. ಅಶ್ವಿನಿ 

2. ಭರಣಿ 

3. ಕೃತಿಕಾ 

4. ರೋಹಿಣಿ 

5. ಮೃಗಶಿರ 

6. ಆರುದ್ರ 

7. ಪುನರ್ವಸು 

8. ಪುಷ್ಯ 

9. ಆಶ್ಲೇಷ 

10. ಮಖ 

11. ಪುಬ್ಬಾ

12. ಉತ್ತರ 

13. ಹಸ್ತ 

14. ಚಿತ್ತಾ 

15. ಸ್ವಾತಿ 

16. ವಿಶಾಖ 

17. ಅನುರಾಧ 

18. ಜೇಷ್ಠ 

19. ಮೂಲ 

20. ಪೂರ್ವಾಷಾಢ 

21. ಉತ್ತರಾಷಾಢ 

22. ಶ್ರವಣ 

23. ಧನಿಷ್ಠ

24. ಶತಭಿಷಾ 

25. ಪೂರ್ವಾಭಾದ್ರ 

26. ಉತ್ತರಾಭಾದ್ರ 

27. ರೇವತಿ


ಮಾಹಿತಿ ಮೂಲ: ಅಂತರ್ಜಾಲ, ಸಾಮಾಜಿಕ ಮಾಧ್ಯಮ

FLN ಕ್ರಿಯಾ ಯೋಜನೆ | Action Plan PDF Download

            2025-26ನೇ ಸಾಲಿನ ಶೈಕ್ಷಣಿಕ ವರ್ಷದ 3 ರಿಂದ 10ನೇ ತರಗತಿಯ FLN (Foundational Literacy and Numeracy) ಕಲಿಕಾ ಫಲಗಳು ಅಥವಾ LAKSHYAS (ಕನ್ನಡದ 9 ಮತ್ತು ಗಣಿತದ 8 ಒಟ್ಟು 17ಕಲಿಕಾ ಫಲಗಳು)  ಗೆ ಸಂಬಂಧಿಸಿದಂತೆ ತಯಾರಿಸಿದ ಮಾದರಿ ಕ್ರಿಯಾ ಯೋಜನೆಯನ್ನು ವಿವೇಕ ಜ್ಯೋತಿ Blog & YouTube Channel ನಿಂದ ತಯಾರಿಸಲಾಗಿದೆ.
FLN ಕ್ರಿಯಾ ಯೋಜನೆ | Action Plan PDF Download

 Download FLN ಕಲಿಕಾ ಫಲಗಳು

ಕ್ರಿಯಾ ಯೋಜನೆ PDF ಡೌನ್ಲೋಡ್ ಮಾಡಿ ಮಾದರಿಯಾಗಿ ಬಳಸಿ...

 
Scan below QR code and Pay you get a PDF.
  • Water Mark ಇಲ್ಲದ PDF ಗೆ Rs 100
  • Water Mark ಇರುವ PDF ಗೆ Rs 200

ಮರುಸಿಂಚನ‌ ಸಾಹಿತ್ಯ | Download Marusinchana Material

ಮರುಸಿಂಚನ‌ ಸಾಹಿತ್ಯ | Download Marusinchana Material

ಮರುಸಿಂಚನ ಕಾರ್ಯಕ್ರಮವು 2023-2024, 2024-2025 ಮತ್ತು 2025-26ರ

ಶಾಲಾ ಸಂಸತ್ತು ರಚನೆ, ಉದ್ದೇಶ ಮತ್ತು ಅವಶ್ಯ ನಮೂನೆಗಳ PDF

ಶಾಲಾ ಸಂಸತ್ತು ರಚನೆ, ಉದ್ದೇಶ, ಪ್ರಯೋಜನಗಳು, ಶಾಲೆಯ ಪಾತ್ರ ಮತ್ತು ಅವಶ್ಯ  ನಮೂನೆಗಳ PDF.
      "ಇಂದಿನ ಮಕ್ಕಳೇ ಇಂದಿನ ಮತ್ತು ಮುಂದಿನ ನಾಯಕರು"; (ಇಂದಿನ ಮಕ್ಕಳು ಇಂದಿನ ಪ್ರಜೆಗಳು) ಇಂದು ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಇದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸಲು ಅನುಕೂಲವಾಗುತ್ತದೆ.
ಶಾಲಾ ಸಂಸತ್ತು ರಚನೆ, ಉದ್ದೇಶ ಮತ್ತು ಅವಶ್ಯ ನಮೂನೆಗಳ PDF
    ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ. 

ಶಾಲಾ ಸಂಸತ್ತು ಚುನಾವಣೆಗೆ ಅವಶ್ಯವಿರುವ ನಮೂನೆಗಳು ಅಥವಾ ದಸ್ತಾವೇಜುಗಳು.

ಸೂಚನೆ: ನಮೂನೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ Download ಮಾಡಿ ಮಾದರಿಯಾಗಿ ಬಳಸಿ.

1. ಶಾಲಾ ಸಂಸತ್ತು ಚುನಾವಣಾ ಅಧಿಸೂಚನೆ.

2. ರಜಿಸ್ಟರ್ 17A

3. ಬ್ಯಾಲೆಟ್ ಪೇಪರ್ 

4. ಪಿ. ಆರ್. ಓ ಡೈರಿ (PRO Dairy)

5. Voter Slips

6. ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ನಮೂನೆ.

7. ಗಂಡು ಹೆಣ್ಣು ನಮೂದು ವಹಿ.

8. ಅಭ್ಯರ್ಥಿಗಳ ನಾಮಪತ್ರ ನಮೂನೆ.

9. ಪ್ರಮಾಣವಚನ.

10. ಮತದಾರರ ಪಟ್ಟಿ.
11. ಚುನಾಯಿತ ಅಭ್ಯರ್ಥಿಗಳ ಪಟ್ಟಿ.

12. ಶಾಲಾ ಸಂಸತ್ತು ಮಂತ್ರಿಗಳ ಪಟ್ಟಿ.


ಶಾಲಾ ಸಂಸತ್ತು ಚುನಾವಣೆ ವಿಡಿಯೋ


ಮಕ್ಕಳ ಶಾಲಾ ಸಂಸತ್ತು: 
ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಹೆಚ್ಚು ಮಹತ್ವ ಪಡೆದಿದೆ. 

ಶಾಲಾ  ಸಂಸತ್‌ನ ಉದ್ದೇಶಗಳು: 

  • ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.
  • ಜವಬ್ದಾರಿಯುತ ನಾಗರಿಕರಾಗಲು ತರಬೇತು ನೀಡುವುದು.
  • ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ತೆಗೆದುಕೊಳ್ಳುವುದು.
  • ಶಾಲೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು.
  • ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು.
  • ಮಕ್ಕಳ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆ ನಿರ್ಮಿಸುವುದು. 
  • ಶಾಲಾ ಆಡಳಿತದಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡುವುದು.
  • ಚುನಾವಣೆಯ ಪ್ರಕ್ರಿಯೆಯನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸುವುದು.
  • ಶಾಲೆ ಮತ್ತು ಸಮುದಾಯದ ನಡುವಿನ ಸೂಕ್ತ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುವುದು.
  • ಮಕ್ಕಳಲ್ಲಿ ಪರಸ್ಪರ ಐಕ್ಯತೆ, ಒಗ್ಗಟ್ಟು ಮತ್ತು ಸಹೋದರತ್ವ ಭಾವನೆ ಬೆಳೆಸುವುದು.
  • ದೇಶ ಕಟ್ಟುವ ಕಾರ್ಯದಲ್ಲಿ ಜವಾಬ್ದಾರಿ ನಾಯಕತ್ವ ಬೆಳೆಸುವುದು.

  • ಸೈದ್ದಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ತಿಳಿಯುವುದು.

ಶಾಲಾ ಸಂಸತ್ತಿನ ಪ್ರಯೋಜನಗಳು:

  • ಸುವ್ಯವಸ್ಥಿತ ಶಾಲೆಯ ನಿರ್ವಹಣೆ.
  • ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ಸುಧಾರಣೆ. 
  • ಶಿಸ್ತಿನ ಪರಿಸರ ನಿರ್ಮಾಣವಾಗುತ್ತದೆ.
  • ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ.
  • ನಿರ್ದಿಷ್ಟ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಆಯೋಜನೆ. 
  • ಕಲಿಕೆಯಲ್ಲಿ ಹಿಂದುಳಿಗೆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲ. 
  • ಶಾಲಾ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಿಕೆ.
  • ಮಕ್ಕಳಲ್ಲಿ ಅಭಿವ್ಯಕ್ತಿ ಹಾಗೂ ಸಂವಹನ ಕೌಶಲಗಳ ಅಭಿವೃದ್ದಿ. 
  • ಮಾನವೀಯ ಮೌಲ್ಯಗಳ ಜಾಗೃತಿಯಾಗುತ್ತದೆ.
  • ಮಕ್ಕಳಲ್ಲಿ ವಿಷಯಾಧಾರಿತ ಕೌಶಲ್ಯಗಳ ಅಭಿವೃದ್ದಿಯಾಗುತ್ತದೆ. 
  • ಮಕ್ಕಳಲ್ಲಿ ನಾಯಕತ್ವದ ಗುಣಗಳ ಅಭಿವೃದ್ದಿ. 
  • ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಾಯೋಗಿಕ ಪರಿಚಯ.
  • ಮಕ್ಕಳಲ್ಲಿ ಆರೋಗ್ಯಕರ ಪೈಪೋಟಿಯ ಬೆಳವಣಿಗೆ. 


ಶಾಲೆಯ ಪಾತ್ರ : 
           ಪ್ರಾಥಮಿಕ ಶಾಲೆಗಳಾದರೆ ಹಿರಿಯ ತರಗತಿ ಮಕ್ಕಳನ್ನು, ಪ್ರೌಢಶಾಲೆಗಳಾದರೆ ಎಲ್ಲಾ ತರಗತಿ ಮಕ್ಕಳನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ರಾಷ್ಟ್ರ, ರಾಜ್ಯ ಅಥವಾ ಸ್ಥಳೀಯ ಚುನಾವಣೆಗಳ ಮಾದರಿಯಲ್ಲಿಯೇ, ಶಾಲಾ ಹಂತದ ಚುನಾವಣೆ ಮೂಲಕ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡಬೇಕು. ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಸದಸ್ಯರಿಗೆ ಅವರ ಸಾಮರ್ಥ್ಯ ಮತ್ತು ಅಪೇಕ್ಷೆಗೆ ತಕ್ಕಂತಹ ಖಾತೆಗಳನ್ನು ಹಂಚಿ ಪ್ರತಿಜ್ಞಾ ವಿಧಿ ಬೋಧಿಸಬೇಕು. ಇಲ್ಲಿ ಶಿಕ್ಷಕರ ವೈಯಕ್ತಿಕ ಹಿತಾಸಕ್ತಿಗಿಂತ ಮಗುವಿನ ಸಾಮರ್ಥ್ಯಕ್ಕೆ ಹೆಚ್ಚು ಆಧ್ಯತೆ ನೀಡಬೇಕು. 

          ನಿಗದಿತ ಅವಧಿಗೆ ಚುನಾಯಿತ ಸದಸ್ಯರೆಲ್ಲ ಸಭೆ ಸೇರಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಮಕ್ಕಳು ತಮ್ಮ ಹಂತದಲ್ಲಿ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳವುದು. ಉಳಿದ ಸಮಸ್ಯೆಗಳನ್ನು ಶಿಕ್ಷಕರು ಹಾಗೂ ಶಾಲಾ ಮುಖ್ಯಸ್ಥರ ಗಮನಕ್ಕೆ ತರುವುದು ಮತ್ತು ಅವುಗಳನ್ನು ಪರಿಹರಿಸಲು ಒತ್ತಾಯ ಮಾಡುವುದು. ಪ್ರತಿ ಸಭೆಯ ನಡಾವಳಿಗಳನ್ನು ದಾಖಲು ಮಾಡಬೇಕು. ಅಗತ್ಯವಿದ್ದಾಗ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಿ ಅವರ ಸಲಹೆ ಪಡೆಯುವುದು. 

        ಶಾಲೆಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಸಂಸತ್ ಸದಸ್ಯರ ನೇತೃತ್ವದಲ್ಲಿ ನಡೆಸುವುದು. ಮಕ್ಕಳು ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯ್ತಿ/ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆಗಳ ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳ ಈಡೇರಿಕೆಗೆ ಒತ್ತಾಯಿಸುವುದು. ಬಾಲ್ಯವಿವಾಹ, ಬಾಲ ಕಾರ್ಮಿಕತನ, ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡಿ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವುದು. ಪ್ರತಿವರ್ಷ ಪಂಚಾಯ್ತಿ ಹಂತದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಮಕ್ಕಳ ಹಿತಾಸಕ್ತಿ ಕಾಪಾಡಲು ಮನವಿ ಸಲ್ಲಿಸುವುದು. ಒಟ್ಟಾರೆ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಸಂಸತ್‌ನ ಆದ್ಯ ಕರ್ತವ್ಯವಾಗಿದೆ. 

ಮಾಹಿತಿ ಕೃಪೆ : 
ಪ್ರಜಾವಾಣಿ ದಿನಪತ್ರಿಕೆ ಮತ್ತು ಅಂತರ್ಜಾಲ..

NMMS Scholorship Scheme-2025-26 | NSP ಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.-VJ

NMMS Scholorship Scheme-2025-26 ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆದಿರುವ ಕುರಿತು.
NMMS Scholorship Scheme-2025-26 | NSP ಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.-VJ

NMMS Scholorship Scheme-2025-26 ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ NMMS ವಿದ್ಯಾರ್ಥಿ ವೇತನಕ್ಕಾಗಿ National Scholarship Portal(NSP) ನಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು, ದಿನಾಂಕ:2-6-2025 ರಿಂದ NSP ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಾರಂಭಿಸಿರುವುದಾಗಿ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ. ಇದನ್ನು ಓದಿ= >> FLN ಕ್ರಿಯಾ ಯೋಜನೆ 3ರಿಂದ10ನೇ ತರಗತಿ 

National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು, ಅನುಸರಿಸಬೇಕಾದ ಪ್ರಮುಖ ಅಂಶಗಳು :

➤2025-26ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
Visit Official Website: www.scholarships.gov.in

➤(OTR) is a unique 14-digit number issued based on the Aadhaar/Aadhaar Enrolment ID (EID)

➤One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.

➤NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೋಬೈಲ್‌ಗೆ SMS ಮೂಲಕ Reference / OTR ಸಂಖ್ಯೆ ಕಳುಹಿಸಲಾಗುತ್ತಿದೆ.

OTR Generateಮಾಡುವ ವಿಧಾನ.


 
ಅರ್ಜಿ ಸಲ್ಲಿಸುವ ವಿಧಾನ 

➤Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) ವಿದ್ಯಾರ್ಥಿಗಳು National Scholarship Portal ನಲ್ಲಿ Student Login ನಲ್ಲಿ ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸನ್ ಸಂಖ್ಯೆಯೆನ್ನು ಪಡೆದುಕೊಳ್ಳಬೇಕಾಗುತ್ತದೆ.

➤2025-26ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾ‌ರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)

ಅ) ಆಧಾ‌ರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು
  1. ಸಕ್ರಿಯ ಮೊಬೈಲ್ ಸಂಖ್ಯೆ
  2. ಆಧಾ‌ರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ
  3. ವಿದ್ಯಾರ್ಥಿಯ ಆಧಾರ್ ಸಂಖ್ಯೆ

ಆ) ಆಧಾ‌ರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು
  1. ಸಕ್ರಿಯ ಮೊಬೈಲ್ ಸಂಖ್ಯೆ
  2. ಪೋಷಕರ ಆಧಾ‌ರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ

➤ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ EID ಮೂಲಕ ನೋಂದಾಯಿಸಿದ ಫಲಾನುಭವಿಗಳ OTR ID ತಾತ್ಕಾಲಿಕವಾಗಿರುತ್ತದೆ.

➤ವಿದ್ಯಾರ್ಥಿಗಳುಆಧಾರ್ ಅನ್ನು ಸಲ್ಲಿಸಿ eKYCಯನ್ನು ನಿಗದಿತ ಸಮಯದೊಳಗೆ ಮಾಡಿದಲ್ಲಿ ಮಾತ್ರ ವಿದ್ಯಾರ್ಥಿವೇತನದ ವಿತರಣೆಯನ್ನು ಮಾಡಲಾಗುತ್ತದೆ.

➤ಪೋಷಕರ ಆಧಾರ್ ಸಂಖ್ಯೆ:
ವಿ ಸೂ : ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ, ಕೂಡ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರ ವಿದ್ಯಾರ್ಥಿಯದ್ದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾ‌ರ್ ಸಂಖ್ಯೆಯನ್ನು update ಮಾಡತಕ್ಕದ್ದು.

ಇ) OTR(One Time Registration) ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳಿಗೆ ಸೂಚನೆಗಳು.

➤2023-24 ಹಾಗೂ 2024-25ನೇ ಸಾಲಿನಲ್ಲಿ face authentication ಮಾಡಿದ ವಿದ್ಯಾರ್ಥಿಗಳಿಗೆ NSPಯ ಮೂಲಕ ಜೆನೆರೇಟ್ ಆದ One Time Registration(OTR) ಸಂಖ್ಯೆಯನ್ನು, ಅರ್ಜಿದಾರರ ನೊಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಿಕೊಡಲಾಗಿದೆ.

➤ಈಗಾಗಲೇ OTR ಸಂಖ್ಯೆಯನ್ನು ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ನೇರವಾಗಿ NSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು

ಈ) ರೆಫರೆನ್ಸ್ ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳು OTR ಪಡೆಯಲು ಅನುಸರಿಸಬೇಕಾದ ಕ್ರಮಗಳು ( ರೆಫರ ಸಂಖ್ಯೆ ಉದಾ: R23-003101555)

➤2023-24ನೇ ಸಾಲಿನಲ್ಲಿ OTP based eKYC ಯನ್ನು ಪೂರ್ಣಗೊಳಿಸಿದ್ದರೂ ಕೂಡ, face authentication ಅನ್ನು ಪೂರ್ಣಗೊಳಿಸದೇ ಇರುವ ವಿದ್ಯಾರ್ಥಿಗಳಿಗೆ MoE ಯಿಂದ ನೋಂದಾಯಿತ ಮೊಬೈಲ್ ಗೆ ರೆಫರೆನ್ಸ್ ಸಂಖ್ಯೆಯನ್ನು ಕಳುಹಿಸಲಾಗಿರುತ್ತದೆ.

➤ರೆಫೆರೆನ್ ಸಂಖ್ಯೆಯನ್ನು ಬಳಸಿಕೊಂಡು, ವಿದ್ಯಾರ್ಥಿಗಳು Face Authentication ಪೂರ್ಣಗೊಳಿಸುವ ಮೂಲಕ OTR ಸಂಖ್ಯೆಯನ್ನು ಪಡೆದುಕೊಳ್ಳುವುದು.

➤ಅದಕ್ಕಾಗಿ ಆಂಡ್ರಾಯ್ಡ್ ಮೊಬೈಲ್‌ನ google play store ನಿಂದ ಈ ಮುಂದೆ ಸೂಚಿಸಿರುವ ಎರಡೂ App ಗಳನ್ನು install ಮಾಡಿಕೊಳ್ಳುವುದು

1. AadhaarFaceRD App ನ್ನು install ಮಾಡಿಕೊಳ್ಳುವುದು.(Link: https://play.google.com/store/apps/details?id=in.gov.uidai.facerd

2. NSP OTR App ನ್ನು install ಮಾಡಿಕೊಳ್ಳುವುದು. (link: https://play.google.com/store/apps/details?id=in.gov.scholarships.nspotr&pli=1)

ಉ) App ಗಳ ಮೂಲಕ OTR ಪಡೆಯುವ ಪ್ರಕ್ರಿಯೆ

➤Mobile ನಲ್ಲಿ NSP OTR App ಅನ್ನು ತೆರೆದಾಗ ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ ಕೆಂಪು ಬಣ್ಣದಲ್ಲಿ ಗುರುತು ಮಾಡಿರುವ “eKYC with FaceAuth” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

➤ಈ screen ನಲ್ಲಿ ವಿದ್ಯಾರ್ಥಿಯು ಪಡೆದಿರುವ Reference ID ನಮೂದಿಸುವುದು.

➤ನಂತರ ಮೊಬೈಲ್ ಗೆ ಬಂದಿರುವ OTP ಹಾಗೂ ಸ್ವೀನ್‌ನಲ್ಲಿ ಸೂಚಿಸಿರುವ CAPTCHA ಸರಿಯಾಗಿ ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿ.

➤ವಿದ್ಯಾರ್ಥಿಯ ಆಧಾರನಲ್ಲಿರುವಂತೆ ಮಾಹಿತಿಗಳು ಸ್ತ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ.ಮಾಹಿತಿಯನ್ನು ಖಚಿತಪಡಿಸಿಕೊಂಡು Proceed For Face Authentication ಮೇಲೆ ಕ್ಲಿಕ್ ಮಾಡಿ.

➤ಸ್ತ್ರೀನ್ ಮೇಲೆ ಕಾಣಿಸಿಕೊಳ್ಳುವ ಸೂಚನೆಗಳನ್ನು ಓದಿಕೊಂಡು I Agree ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

➤ಈಗ ವಿದ್ಯಾರ್ಥಿಯ Face authentication ಮಾಡಲು ಹೊಸ screen ಕಾಣಿಸಿಕೊಳ್ಳುತ್ತದೆ.

➤Screen ಮೇಲಿರುವ ಸೂಚನೆಗಳನ್ನು ಓದಿಕೊಂಡು check box ನಲ್ಲಿ ” Tick Mark” ಗುರ್ತಿಸಿ Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.

➤ನಂತರ Face authentication screen ಕಾಣಿಸಿಕೊಳ್ಳುತ್ತದೆ.

➤Screen ಮೇಲೆ ಕಾಣಿಸಿಕೊಳ್ಳುವ ವೃತ್ತಾಕಾರದೊಳಗೆ ವಿದ್ಯಾರ್ಥಿಯ ಮುಖ ಸ್ಪಷ್ಟವಾಗಿ ಗೋಚರಿಸುವಂತೆ ಇರಬೇಕು.

➤ನಂತರ Pls Blink to capture ಎಂಬ ಸೂಚನೆ ಕಾಣಿಸಿದಾಗ ವಿದ್ಯಾರ್ಥಿಯು ಕಣ್ಣು ರೆಪ್ಪೆ ಮುಚ್ಚಿ ತೆರೆದಾಗ Face Capture ಆಗುತ್ತದೆ. ( Error ಬಂದಲ್ಲಿ ಮತ್ತೆ ಪ್ರಯತ್ನಿಸಿ)

➤Face authentication successfully completed ಎಂಬ ಮಾಹಿತಿಯೊಂದಿಗೆ OTR ಸಂಖ್ಯೆ ಜನರೇಟ್ ಆಗುತ್ತದೆ.

➤ಜನರೇಟ್ ಆದ OTR ಸಂಖ್ಯೆ ಹಾಗೂ Password ನೋಂದಾಯಿತ ಮೊಬೈಲ್ ಗೆ SMS ಬರುತ್ತದೆ.

➤ಈಗ login ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಕಾಣಿಸಿಕೊಳ್ಳುವ ಸ್ಕಿನ್ ನಲ್ಲಿ OTR ಸಂಖ್ಯೆ ಹಾಗೂ Password ಹಾಗೂ CAPTCHA ಸರಿಯಾಗಿ ನಮೂದಿಸಿ login ಆಗಿ ಹೊಸ password ಸೃಜಿಸಿಕೊಳ್ಳುವುದು. (ಕನಿಷ್ಟ ಒಂದು Upper case, Lower case, special character, numerical character ಒಳಗೊಂಡಂತೆ ಕನಿಷ್ಠ 8 character ಇರಬೇಕು)

➤ಕೆಳಗಿರುವ CAPTCHA ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿದಾಗ, Password successfully updated ಎಂಬ ಮಾಹಿತಿ ಲಭ್ಯವಾಗುತ್ತದೆ.

➤ಈ ರೀತಿ ನಡೆದ OTR a Password  National Scholarship Portal ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸುವುದು.

ಊ) Reference ID ಪಡೆಯದೇ ಇರುವ Fresh ವಿದ್ಯಾರ್ಥಿಗಳು ವಹಿಸಬೇಕಾದ ಕ್ರಮಗಳು

➤ವಿದ್ಯಾರ್ಥಿಗಳು NSP ನಲ್ಲಿ Login ಆಗುವುದು.

➤Apply for One Time Registration ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ Register ಮೇಲೆ ಕ್ಲಿಕ್ ಮಾಡುವುದು.

➤ಸೂಚನೆಗಳನ್ನು ಓದಿಕೊಂಡು check box ನಲ್ಲಿ” TICK MARK” ಗುರ್ತಿಸಿ Next ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ಕ್ರೀನ್ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ OTP ಪಡೆಯುವುದು.

➤ಪಡೆದ OTP ಹಾಗೂ Captcha ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು.

➤ಕಾಣಿಸಿಕೊಳ್ಳುವ ಸ್ತ್ರೀನ್ ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ OTP ಪಡೆಯುವುದು.
 
➤ಪಡೆದ OTP ಹಾಗೂ Captcha ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು. CAPCTHA ಅನ್ನು ನಮೂದಿಸಿ Verify ಮೇಲೆ ಕ್ಲಿಕ್ ಮಾಡುವುದು.

➤ಈಗ Reference ID ಜನರೇಟ್ ಆಗುತ್ತದೆ.

➤ಮೇಲೆ ಕಂಡಿಕೆ ಈ ಹಾಗೂ ಉ ನಲ್ಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸಿ ನಂತರ National Scholarship Portal ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸುವುದು.



ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನಾ ಹಂತಗಳು.

➤ವಿವಿಧ ಹಂತದ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯಗಳು

ಜಿಲ್ಲಾ (ಡಯಟ್) ಹಂತ:
➤ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು NSP OTR ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದು.

➤ಸ್ಥಳೀಯ ಪತ್ರಿಕೆಗಳಲ್ಲಿ NMMS ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಮಾಡುವುದು.

➤ಸ್ಥಳೀಯ ಕೇಬಲ್ ನೆಟ್ವರ್ಕ ಮುಖಾಂತರ NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಚಾರ ಮಾಡುವುದು.

➤ತಮ್ಮ ವ್ಯಾಪ್ತಿಯಲ್ಲಿ ಬರುವ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದು.

➤ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳಿಂದ NSPನಲ್ಲಿ Submit ಆಗಿರುವ ಅರ್ಜಿಗಳನ್ನು ಜಿಲ್ಲಾ ಹಂತದಲ್ಲಿ NMMS ಮಾರ್ಗಸೂಚಿ ಅನುಸಾರವಾಗಿ Verify ಮಾಡುವುದು.

➤ಪ್ರತಿ 15 ದಿನಗಳಿಗೊಮ್ಮೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು NMMS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.

➤ಜಿಲ್ಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು, ನಿಗಧಿತ ಅವಧಿಯೊಳಗಡೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

ತಾಲ್ಲೂಕು ಹಂತ :
➤ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಯರ ಸಭೆ ಕರೆದು NSP OTR ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅರ್ಜಿಗಳನ್ನು INO Login ನಲ್ಲಿ Verify ಮಾಡುವ ಕ್ರಮದ ಬಗ್ಗೆ ತಿಳಿಸುವುದು.

➤ಸ್ಥಳೀಯ ಸುದ್ದಿ ಮಾಧ್ಯಮಗಳನ್ನು ಬಳಸಿಕೊಂಡು NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಚಾರ ಮಾಡುವುದು.

➤NMMS ವಿದ್ಯಾರ್ಥಿ ವೇತನದ ಬಗ್ಗೆ ಬ್ಯಾನರ್ / ಪಾಂಪ್ಲೆಟ್ ಗಳನ್ನು ಬಳಸಿ ಪ್ರಚಾರ ಮಾಡುವುದು.ತಮ್ಮ ಕಛೇರಿಯ NOTICE BOARD ನಲ್ಲಿ ಈ ಕುರಿತು ಪ್ರಕಟಿಸಲು ಕ್ರಮ ವಹಿಸುವುದು.

➤ಪ್ರತಿ 15 ದಿನಗಳಿಗೊಮ್ಮೆ ಶಾಲಾ ಮುಖ್ಯಸ್ಥರು/ಪ್ರಾಂಶುಪಾಲರುಗಳ ಸಭೆ ಕರೆದು NMMS ವಿದ್ಯಾರ್ಥಿ ವೇತನದ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.

ಶಾಲಾ /ಪದವಿ ಪೂರ್ವ ಹಂತ :
➤ಶಿಕ್ಷಕರು / ಉಪನ್ಯಾಸಕರುಗಳಿಗೆ ತರಗತಿಗಳಲ್ಲಿ NMMS ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲು ತಿಳಿಸುವುದು.

➤ಅರ್ಜಿ ಸಲ್ಲಿಸುವ ಪೂರ್ವದಲ್ಲಿ Guidelines for Registration on National Scholarship Portal ಅನ್ನು ಪೂರ್ಣವಾಗಿ ಓದಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮುಖ್ಯ ಶಿಕ್ಷಕರು ಕ್ರಮವಹಿಸುವುದು.

➤ಶಾಲಾ / ಕಾಲೇಜು NOTICE BOARD ನಲ್ಲಿ ಈ ಕುರಿತು ಪ್ರಕಟಿಸುವುದು.

➤www.scholarship.gov.in ವೆಬ್ಸೈಟ್ ನ NSP & Institute Login ನಲ್ಲಿ USER ID, ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಆದ ನಂತರ School Profile ಅಪ್ ಡೇಟ್ ಮಾಡಿಕೊಳ್ಳುವುದು.

➤ಶಾಲಾ / ಕಾಲೇಜು ಮುಖ್ಯಸ್ಥರು ಅರ್ಹ ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಅರ್ಜಿ ಸಲ್ಲಿಸಲು ತಿಳಿಸುವುದು.

➤ವಿದ್ಯಾರ್ಥಿಗಳು Submit ಮಾಡಿರುವ ಅರ್ಜಿಯ ಧೃಡೀಕೃತ ಪ್ರತಿಯನ್ನು ಪಡೆದು, ಶಾಲೆಯಲ್ಲಿ ಪ್ರತ್ಯೇಕ ಕಡತ ನಿರ್ವಹಿಸುವುದು.

➤ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ನವೀಕೃತ ಆದಾಯ ಪ್ರಮಾಣ ಪತ್ರ, ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪಾಸ್ ಬುಕ್ ಮುಂತಾದವುಗಳ ದೃಢೀಕೃತ ಪ್ರತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.

➤ವಿದ್ಯಾರ್ಥಿಗಳು NSP ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು NMMS ಮಾರ್ಗಸೂಚಿ ಅನುಸಾರವಾಗಿ, ನಿಗಧಿತ ಅವಧಿಯೊಳಗಾಗಿ Verify ಮಾಡುವುದು.

➤ಶಾಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು, ನಿಗಧಿತ ಅವಧಿಯೊಳಗಡೆ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.

➤ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ / ಕಾಲೇಜು ಮುಖ್ಯಸ್ಥರು ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ NMMS ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವುದು,

ವಿ. ಸೂ : ಶೈಕ್ಷಣಿಕ ಜಿಲ್ಲೆಗಳಾದ ಚಿಕ್ಕೋಡಿ, ಬೆಂಗಳೂರು ಉತ್ತರ, ಮಧುಗಿರಿ ಹಾಗೂ ಶಿರಸಿ ಜಿಲ್ಲೆಯವರು ಕಡ್ಡಾಯವಾಗಿ ಕಂದಾಯ ಜಿಲ್ಲೆಗಳಾದ ಬೆಳಗಾವಿ, ಬೆಂಗಳೂರು ದಕ್ಷಿಣ, ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ನೋಡಲ್ ಅಧಿಕಾರಿಗಳ ಸಮನ್ವಯದೊಂದಿಗೆ ವಿದ್ಯಾರ್ಥಿಗಳ ಅರ್ಜಿಗಳನ್ನು NSP ನಲ್ಲಿ Verification ಕಾರ್ಯವನ್ನು ಮಾಡುವುದು.

        www.scholarships.gov.in website services optionsನಲ್ಲಿ ಲಭ್ಯವಿರುವ user manual, Institute operation manual, FAQ’s ಹಾಗೂ ಇತರೆ ಮಾಹಿತಿಗಳನ್ನು download ಮಾಡಿಕೊಳ್ಳಬಹುದಾಗಿದೆ.
            ಸುತ್ತೋಲೆಯ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ National Scholarship Portal ಮೂಲಕ ಅರ್ಜಿ ಸಲ್ಲಿಸಲು ಸೂಕ್ತ ಕ್ರಮವಹಿಸಿ, ಎಲ್ಲಾ ಅರ್ಹ ಫಲಾನುಭವಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕ್ರಮವಹಿಸುವಂತೆ ಸೂಚಿಸಲಾಗಿದೆ.