ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಗುರುಪೂರ್ಣಿಮೆ ಆಚರಣೆಯ ಹಿನ್ನೆಲೆ ಮತ್ತು ವಿಶೇಷತೆ

ಗುರುಪೂರ್ಣಿಮೆ – ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಗುರುಪೂರ್ಣಿಮೆ ಆಚರಣೆಯ ಹಿನ್ನೆಲೆ ಮತ್ತು ವಿಶೇಷತೆ

              ಗುರುಪೂರ್ಣಿಮೆ (ವ್ಯಾಸ ಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳು. ಇಂತಹ ಪರಮಪೂಜ್ಯನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ. 

            ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಇಂತಹ ಮಹಾನ್ ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ. ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.

ಗುರು ಪೂರ್ಣಿಮಾ ಮಹತ್ವ
               ಗುರು ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ದಾರಿ ತೋರಿಸುವ ವ್ಯಕ್ತಿ. ಗುರುಗಳು ತಮ್ಮ ಪಾಠ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನು ನಿರಂತರವಾಗಿ ಬೆಳಗಿಸುವ ವ್ಯಕ್ತಿಯಾಗಿದ್ದಾನೆ. ಗುರು ಓರ್ವ ವ್ಯಕ್ತಿಗೆ ಸದಾಚಾರದ ಮಾರ್ಗವನ್ನು ಅನುಸರಿಸಲು ಯಾವಾಗಲೂ ಪ್ರೋತ್ಸಾಹಿಸುತ್ತಾನೆ ಹಾಗೂ ಜೀವನದ ಪ್ರತಿಯೊಂದು ಪಾಠವನ್ನು ನಮಗೆ ಕಲಿಸುತ್ತಾನೆ. ಅವನ ಸೂಚನೆಯಿಲ್ಲದೆ, ನಮ್ಮ ದಾರಿಯಲ್ಲಿ ಬರುವ ಕತ್ತಲೆಯನ್ನು ಹೋಗಲಾಡಿಸುವುದು ಕಷ್ಟ. ಇಲ್ಲಿ, ಕತ್ತಲೆಯು ಗೊಂದಲ ಮತ್ತು ಬುದ್ಧಿವಂತಿಕೆಯ ಕೊರತೆಯನ್ನು ಪ್ರತಿನಿಧಿಸುತ್ತದೆ.

        ಅವರು ಉತ್ತಮ ಮನುಷ್ಯರಾಗಲು ನಮಗೆ ಸಹಾಯ ಮಾಡುತ್ತಾರೆ ಮತ್ತು ಮಾನವೀಯತೆಯ ಬಗ್ಗೆ ನಮಗೆ ಜ್ಞಾನವನ್ನು ನೀಡುತ್ತಾರೆ. ಕೆಲವೊಮ್ಮೆ ಅವರು ಆಧ್ಯಾತ್ಮಿಕ ಗುರು, ನಮ್ಮ ಜೀವನವನ್ನು ಅತ್ಯಂತ ಆಳವಾದ ಆಧ್ಯಾತ್ಮಿಕ ತಿಳುವಳಿಕೆಯೊಂದಿಗೆ ಬೆಳಗಿಸುತ್ತಾರೆ. ಒಳ್ಳೆಯ ಜೀವನ ನಡೆಸಲು ಗುರು ಬೇಕು. ಆದ್ದರಿಂದ ಈ ದಿನ ನಿಮ್ಮ ತಾಯಿ ಮತ್ತು ತಂದೆಯಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳಿ. ಇವರೇ ನಮ್ಮ ಮೊದಲ ಗುರುಗಳು ಮತ್ತು ನಿಮ್ಮನ್ನು ಎಂದಿಗೂ ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ.


ಗುರು ಪೂರ್ಣಿಮಾ ಇತಿಹಾಸ

         ಹಿಂದೂ ಪುರಾಣಗಳ ಪ್ರಕಾರ, ಈ ಮಂಗಳಕರ ದಿನವು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಒಬ್ಬರಾದ ಮತ್ತು ಋಷಿ ಪರಾಶರ ಪುತ್ರ ವ್ಯಾಸರ ಜನ್ಮ ದಿನವನ್ನು ಸೂಚಿಸುತ್ತದೆ. ವೇದಗಳ ಪ್ರಕಾರ, ಅವರು ಆಕಾಶದ ಮಗುವಾಗಿದ್ದರು, ಅವರು ಎಲ್ಲಾ ಮೂರು ಕಾಲಗಳ ಬಗ್ಗೆ ಜ್ಞಾನವನ್ನು ಹೊಂದಿದ್ದರು.

                ಜನರು ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ನಿಷ್ಕ್ರಿಯರಾಗುತ್ತಾರೆ ಎಂದು ಅವರು ನಿರೀಕ್ಷಿಸಿದ್ದರಿಂದ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಸುಲಭವಾಗುವಂತೆ ಅವರು ಅವುಗಳನ್ನು ಸಂಪಾದಿಸಿದರು. ಅದಕ್ಕಾಗಿಯೇ ಅವರನ್ನು ಅತ್ಯಂತ ಪ್ರಾಚೀನ ಗುರು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದು ಸಹ ಆಚರಿಸಲಾಗುತ್ತದೆ.


ಗುರು ಪೂರ್ಣಿಮಾದಂದು ಏನು ಮಾಡಬೇಕು.?

  • ಮುಂಜಾನೆ ಬೇಗ ಎದ್ದು ನಿಮ್ಮ ತಂದೆ, ತಾಯಿ ಮತ್ತು ಹಿರಿಯ ಒಡಹುಟ್ಟಿದವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಅವರ ಆಶೀರ್ವಾದ ಪಡೆಯಿರಿ.
  • ಸ್ನಾನದ ನಂತರ, ಸೂರ್ಯನನ್ನು ಪ್ರಾರ್ಥಿಸಿ.
  • ಜ್ಞಾನ ಮತ್ತು ಬುದ್ಧಿವಂತಿಕೆ ದೇವರಾಗಿರುವ ಗಣೇಶನನ್ನು ಪೂಜಿಸಿ.
  • ನೀವು ಆಧ್ಯಾತ್ಮಿಕ ಗುರುವನ್ನು ಹೊಂದಿದ್ದರೆ, ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವರ ಪಾದಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಿರಿ.
  • ಗುರು ಪೂರ್ಣಿಮೆಯ ಈ ಮಂಗಳಕರ ದಿನದಂದು, ಬ್ರಾಹ್ಮಣರು ಮತ್ತು ಗುರುಗಳಿಗೆ ವಸ್ತ್ರಗಳು, ಪಾದರಕ್ಷೆಗಳು, ಹಣ್ಣುಗಳು ಮತ್ತು ದಕ್ಷಿಣೆಯನ್ನು ಅರ್ಪಿಸಿ. ನಿಮ್ಮ ತಂದೆಗೆ ಸಿಹಿತಿಂಡಿಗಳನ್ನು ಸಹ ನೀಡಿ.
  • ಗುರು ಮಂತ್ರವನ್ನು ಪಠಿಸಿ.


ಗುರು ಮಂತ್ರಗಳು

1. ಓಂ ಗುರುಭ್ಯೋ ನಮಃ

2. ಓಂ ಗುಂ ಗುರುಭ್ಯೋ ನಮಃ

3. ಓಂ ಪರಮತ್ತ್ವಾಯ ನಾರಾಯಣ ಗುರುಭ್ಯೋ ನಮಃ

4. ಓಂ ವೇದಾಹಿ ಗುರು ದೇವಾಯ ವಿದ್ಮಹೇ

5. ಪರಂ ಗುರುವೇ ಧೀಮಹಿ

6. ತನ್ನೋಃ ಗುರುಃ ಪ್ರಚೋದಯಾತ್.

7. ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ |ಗುರು ಸಾಕ್ಷಾತ್ ಪರ ಬ್ರಹ್ಮ. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಗುರು ನಿಜವಾಗಿಯೂ ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತಿನಿಧಿ. ಜ್ಞಾನವನ್ನು ಸೃಷ್ಟಿಸುತ್ತಾನೆ, ಉಳಿಸಿಕೊಳ್ಳುತ್ತಾನೆ ಹಾಗೂ ಅಜ್ಞಾನದ ಕಳೆಯನ್ನು ನಾಶಮಾಡುತ್ತಾನೆ. ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

8. ಅಖಂಡ ಮಂಡಲಾಕಾರಂ, ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ| ತಸ್ಮೈ ಶ್ರೀ ಗುರುವೇ ನಮಃ 

ಶ್ಲೋಕದ ಅರ್ಥ: ಇಡೀ ವಿಶ್ವದಲ್ಲಿ ಎಲ್ಲಾ ಜೀವಿಗಳು ಮತ್ತು ನಿರ್ಜೀವ ಜೀವಿಗಳನ್ನು ವ್ಯಾಪಿಸಿರುವ ಅತ್ಯುನ್ನತ ಜ್ಞಾನಕ್ಕೆ ಗುರುವು ನಮಗೆ ಮಾರ್ಗದರ್ಶನ ನೀಡಬಹುದು. ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ. 

9. ಅಜ್ಞಾನ ತಿಮಿರಾಂಧಸ್ಯ. ಜ್ಞಾನ ಅಂಜನಾ ಶಾಲಾಕಾಯಾ
ಚಕ್ಷುಹು ಉನ್ಮೀಲಿತಂ ಯೇನಮ್| ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಒಬ್ಬ ಗುರುವು ನಮಗೆ ಜ್ಞಾನದ ಮುಲಾಮು ಅಥವಾ ಪರಮಾತ್ಮನ ಅರಿವನ್ನು ಲೇಪಿಸುವ ಮೂಲಕ ಅಜ್ಞಾನದ (ಕತ್ತಲೆಯ) ವೇದನೆಯಿಂದ ನಮ್ಮನ್ನು ರಕ್ಷಿಸಬಹುದು, ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

10. ಸ್ಥಾವರಂ ಜಂಗಮಂ ವ್ಯಾಪ್ತಮ್. ಯತ್ಕಿಂಚಿತ್ ಸಹರಾ ಚರಂ
ತತ್ಪದಂ ದರ್ಶಿತಂ ಯೇನ| ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಮೂರು ಪ್ರಪಂಚ ಅಥವಾ ಅವಸ್ಥೆಗಳಲ್ಲಿ (ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ ಚಟುವಟಿಕೆ, ಕನಸು ಮತ್ತು ಆಳವಾದ ನಿದ್ರೆಯ ಸ್ಥಿತಿ) ಇರುವ ಎಲ್ಲೆಡೆ ವ್ಯಾಪಿಸಿರುವ ಪ್ರಜ್ಞೆಯ ಬಗ್ಗೆ ನಮಗೆ ಜ್ಞಾನೋದಯ ಮಾಡಬಲ್ಲ ಆ ಗುರು, ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

11. ಚಿನ್ಮಯಂ ವ್ಯಾಪಿ ಯತ್ಸರ್ವಮ್. ತ್ರೈಲೋಕ್ಯ ಸಹರಾ ಚರಂ
ತತ್ಪದಂ ದರ್ಶಿತಂ ಯೇನ| ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಜಡವಾಗಿರುವ (ನಿಶ್ಚಲ) ಮತ್ತು ಕ್ರಿಯಾಶೀಲವಾಗಿರುವ ಎಲ್ಲದರಲ್ಲೂ ಇರುವ ಏಕ ದೈವತ್ವದ ಕಡೆಗೆ ನನ್ನ ನಮನವನ್ನು ನಿರ್ದೇಶಿಸುವ ಪೂಜ್ಯ ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.

12. ಸರ್ವ ಶ್ರುತಿ ಶಿರೋರತ್ನ ವಿರಜಿತ ಪದ್ಮಾಭುಜ
ವೇದಾನ್ತಾಮ್ಬುಜ ಸೂರ್ಯೋ ಯಃ| ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಶ್ರುತಿಗಳ (ವೇದಗಳ) ಸಾಗರ, ಜ್ಞಾನದ ಸೂರ್ಯ (ಈ ಕಿರಣಗಳಿಂದ ನಮ್ಮ ಅಜ್ಞಾನವನ್ನು ನಾಶಮಾಡುವ) ಈ ಗುರು, ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

13. ಚೈತನ್ಯ ಶಾಶ್ವತಃ ಶಾಂತೋ. ವೋಮತೀತೋ ನಿರಂಜನಃ |
ಬಿಂದು ನಾದ ಕಲಾತೀತಃ ತಸ್ಮೈ ಶ್ರೀ ಗುರುವೇ ನಮಃ |

ಶ್ಲೋಕದ ಅರ್ಥ: ಯಾವ ಗುರುವು ಬದಲಾಗದ, ಎಂದೆಂದಿಗೂ ಪ್ರಸ್ತುತ, ಶಾಂತಿಯುತ ಚೇತನದ ಪ್ರತಿನಿಧಿಯೂ, ಒಬ್ಬನೇ ಮತ್ತು ಸ್ಥಳ ಹಾಗೂ ಕಾಲದ ವ್ಯಾಪ್ತಿಯನ್ನು ಮೀರಿದವನು. ಯಾರ ದೃಷ್ಟಿ ಯಾವಾಗಲೂ ಮೋಡಿಮಾಡುವನೋ, ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

14. ಜ್ಞಾನ ಶಕ್ತಿ ಸಮಾರೂಢಃ ತತ್ವ ಮಾಲಾ ವಿಭೂಷಿತ
ಭುಕ್ತಿ ಮುಕ್ತಿ ಪ್ರದಾನೇನ. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಜ್ಞಾನಸಾಗರವಾಗಿರುವವನು, ಸದಾ ಯೋಗದಲ್ಲಿ (ದೇವರೊಡನೆ ಏಕಾಭಿಪ್ರಾಯ) ಇರುವವನು, ಈಶ್ವರ ತತ್ವದ ಜ್ಞಾನದಿಂದ ಕಂಗೊಳಿಸುತ್ತಿರುವವನು, ಈ ಲೌಕಿಕ ಅಸ್ತಿತ್ವದಿಂದ ನಮ್ಮನ್ನು ಮುಕ್ತಗೊಳಿಸಬಲ್ಲವನು, ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

15. ಅನೇಕ ಜನ್ಮ ಸಂಪ್ರಾಪ್ತ. ಕರ್ಮ ಬಂಧ ವಿದಾಹಿನೇ
ಆತ್ಮಜ್ಞಾನ ಪ್ರದಾನೇನ. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಆತ್ಮಜ್ಞಾನವನ್ನು ಬೋಧಿಸುವ ಮೂಲಕ ಹಲವಾರು ಜೀವಗಳ ಮೇಲೆ ಸಂಗ್ರಹವಾದ ಕರ್ಮದ ಸರಪಳಿಯಿಂದ ಮುಕ್ತರಾಗಲು ನಮಗೆ ಸಹಾಯ ಮಾಡುವವನು ಅಂತಹ ಗುರುವಿಗೆ ನಮಸ್ಕರಿಸುತ್ತೇನೆ.

16. ಶೋಷಣಾಂ ಭವ ಸಿಂಧೋಶ್ಚ. ಜ್ಞಾನಪಾನಂ ಸಾರಸಮ್ಪದಃ
ಗುರೋರ್ ಪದೋದಕಂ ಸಮ್ಯಕ್. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಈ ಜೀವನಸಾಗರವನ್ನು ದಾಟಲು ನಮಗೆ ಸಹಾಯ ಮಾಡುವವನು, ನಮಗೆ ಪರಮಾತ್ಮನನ್ನು ಬಹಿರಂಗಪಡಿಸುವವನು, ನಾನು ಅವನ ಪಾದುಕೆಗಳನ್ನು ಆರಾಧಿಸುತ್ತೇನೆ. ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

17. ನ ಗುರೋರ್ ಅಧಿಕಂ ತತ್ವಮ್. ನ ಗುರು ಅಧಿಕಂ ತಪಃ ತತ್ವ ಜ್ಞಾನಾತ್ ಪರಂ ನಾಸ್ತಿ. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಗುರುವಿಗಿಂತ ದೊಡ್ಡ ತತ್ವವಿಲ್ಲ. ಗುರುವಿಗಿಂತ ದೊಡ್ಡ ತಪಸ್ಸು ಇಲ್ಲ. ಅಂತಹ ಗುರುವಿನ ಧ್ಯಾನಕ್ಕಿಂತ ಮಿಗಿಲಾದ ಜ್ಞಾನವಿಲ್ಲ. ಅಂತಹ ಗುರುವಿಗೆ ನಾನು ನಮಸ್ಕರಿಸುತ್ತೇನೆ.

18.  ಮನ್ನಾಥ ಶ್ರೀ ಜಗನ್ನಾಥೋ. ಮದ್ಗುರು ಶ್ರೀ ಜಗದ್ಗುರು ಮ ಆತ್ಮ ಸರ್ವ ಭೂತಾತ್ಮ. ತಸ್ಮೈ ಶ್ರೀ ಗುರುವೇ ನಮಃ

ಶ್ಲೋಕದ ಅರ್ಥ: ಪ್ರಪಂಚದ ಬಗವಂತ ನನ್ನ ಪ್ರಭು ಮತ್ತು ಪ್ರಪಂಚದ ಗುರು ನನ್ನ ಗುರು, ನನ್ನಲ್ಲಿರುವ ಆತ್ಮವು ಎಲ್ಲರಲ್ಲಿಯೂ ಇರುವ ಒಂದೇ (ಎಲ್ಲಾ ಜೀವಿಗಳಲ್ಲಿ ಅಂತರ್ಗತವಾಗಿರುವ ಅದೇ ದೈವತ್ವ). ಅಂತಹ ಗುರುವಿಗೆ (ನನಗೆ ಈ ಒಳನೋಟವನ್ನು ನೀಡುವ) ನಾನು ನಮಸ್ಕರಿಸುತ್ತೇನೆ.

ಮಾಹಿತಿ ಕೃಪೆ : ಅಂತರ್ಜಾಲ 


ನನ್ನ ಜೀವನವನ್ನು ರೂಪಿಸಿದ ಗುರುಗಳಿಗೆ ಗೌರವಪೂರ್ವಕ ನಮನಗಳು.

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ (JNVST) - 2025

       ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 28 ರಾಜ್ಯಗಳು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು.
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ (JNVST) - 2025

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಟಿ

 16 ಜುಲೈ, 2024

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಜುಲೈ  29, 2025

Hall Ticket ಬಿಡುಗಡೆ ದಿನಾಂಕ : Update soon 

ಪರೀಕ್ಷೆ ನಡೆಯುವ ದಿನಾಂಕ : 18 ಜನೆವರಿ 2025

ಫಲಿತಾಂಶ ದಿನಾಂಕ Update soon 

@ಅರ್ಜಿ ಸಲ್ಲಿಸಲು ಅರ್ಹತೆಗಳು@

1. ಪ್ರಸ್ತುತ ವರ್ಷದಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
2. ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಮತ್ತು ವಿದ್ಯಾರ್ಥಿಯ ಶಾಲೆ ವಿಳಾಸ ಒಂದೇ ಜಿಲ್ಲೆಯಲ್ಲಿರಬೇಕು.
3. ವಿದ್ಯಾರ್ಥಿಯು 01/05/2013 ಮತ್ತು 30/04/2015ರ ನಡುವೆ ಜನಿಸಿರಬೇಕು.
4. ವಿದ್ಯಾರ್ಥಿಯು ಶಾಲೆಗೆ 31/07/2024 ಒಳಗೆ 5ನೇ ತರಗತಿಗೆ ದಾಖಲಾಗಿರಬೇಕು.

@ಅರ್ಜಿ ಸಲ್ಲಿಸುವ ವಿಧಾನ@

ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ  https://navodaya.gov.in ನಲ್ಲಿ ಭರ್ತಿ ಮಾಡಬೇಕು. 

ಸಲ್ಲಿಸಿದ ಪ್ರವೇಶ ನಮೂನೆಯ ಪ್ರತಿಯನ್ನು  ಮುಂದಿನ ವ್ಯವಹಾರಗಳ ಸಲುವಾಗಿ ಕಾಯ್ದಿಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಕೆಳಗಿನ LINK ಕ್ಲಿಕ್ ಮಾಡಿ


@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@

1. ವಿದ್ಯಾರ್ಥಿಯ ಭಾವಚಿತ್ರ.
2. ವಿದ್ಯಾರ್ಥಿಯ ಸಹಿ.
3. ಪೋಷಕರ ಸಹಿ.
4. ಆಧಾರ್ ಕಾರ್ಡ್ ನಂಬರ್.
5. ಮುಖ್ಯ ಶಿಕ್ಷಕರ ಸಹಿ ಮಾಡಿ ಭರ್ತಿ ಮಾಡಿರುವ ಅರ್ಜಿ(☟Study Certificate☟)


        @ಪರೀಕ್ಷೆ & ಪ್ರಶ್ನೆ ಪತ್ರಿಕೆ ಸ್ವರೂಪ@

 ಈ ಪ್ರವೇಶ ಪರೀಕ್ಷೆಯನ್ನು ನವೋದಯ ವಿದ್ಯಾಲಯ ಸಮಿತಿ ನಡೆಸುತ್ತದೆ.
➣ ಆಯ್ಕೆ ಪರೀಕ್ಷೆಯು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 01:30 ರವರೆಗೆ ಎರಡು ಗಂಟೆಗಳ ಅವಧಿಯಾಗಿರುತ್ತದೆ.
➣ ಕೇವಲ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳೊಂದಿಗೆ 3 ವಿಭಾಗಗಳನ್ನು ಹೊಂದಿರುತ್ತದೆ.
➣ ಪರೀಕ್ಷೆಯ ಅಂಕ : 100ಅಂಕ.
➣ ಪರೀಕ್ಷೆಯ ಸಮಯ : 2 ಗಂಟೆ
(ದಿವ್ಯಾಂಗ್ ವಿದ್ಯಾರ್ಥಿಗಳು ಅಥವಾ ವಿಕಲಚೇತನ ವಿದ್ಯಾರ್ಥಿಗಳಿಗೆ' ಹೆಚ್ಚುವರಿ 40 ನಿಮಿಷಗಳ ಸಮಯವನ್ನು ನೀಡಲಾಗುವುದು)

ವಿಷಯಗಳು 

ಪ್ರಶ್ನೆಗಳ ಸಂಖ್ಯೆ

ಅಂಕಗಳು

ಸಮಯ

ಮಾನಸಿಕ ಸಾಮರ್ಥ್ಯ ಪರೀಕ್ಷೆ

40

50

60 ನಿಮಿಷಗಳು

ಅಂಕಗಣಿತ ಪರೀಕ್ಷೆ 

20

25

30 ನಿಮಿಷಗಳು

ಭಾಷಾ ಪರೀಕ್ಷೆ

20

25

30 ನಿಮಿಷಗಳು

ಒಟ್ಟು

80

100

120 ನಿಮಿಷಗಳು

KSET 2024 ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ

     ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) - 2024 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. 

KSET 2024 ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ

ಕೆಸೆಟ್-2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

☞ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 29.07.2024 

☞ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 22.08.2024

☞ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.08.2024

☞ ಪರೀಕ್ಷೆ ದಿನಾಂಕ  : 24.11.2024


ಅರ್ಜಿ ಸಲ್ಲಿಸುವ ವಿಧಾನ : 
ಅಭ್ಯರ್ಥಿಗಳು ಕೆಸೆಟ್-2024ಕ್ಕೆ "Online" ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸಲು Website ವಿಳಾಸ : 
KEA ವೆಬ್ಸೈಟ್ http:/kea.kar.nic.in ಅನ್ನು ಪ್ರವೇಶಿಸುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. (ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ)


K-SET ಪರೀಕ್ಷೆಗೆ Online ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನದ ವಿಡಿಯೋ

ಅರ್ಹತಾ ನಿಬಂಧನೆಗಳು :
1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ  ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-1, IIA, IIB, IIIA, IIIB), ವಿಕಲಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು. 

2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.

ವಯೋಮಿತಿ :
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.

ಪರೀಕ್ಷೆ ಶುಲ್ಕ :
ವರ್ಗಶುಲ್ಕ
ಸಾಮಾನ್ಯ ವರ್ಗ, II-A, II-В, ІІІ-А, ІІІ-В ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆರೂ.1000/-
ಪ್ರವರ್ಗ-I, SC, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆರೂ.700/-

ಶುಲ್ಕ ಪಾವತಿಸುವ ವಿಧಾನ :
ಪರೀಕ್ಷೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

E-Sign  ಅರ್ಜಿಯನ್ನು  ಡೌನ್ಲೋಡ್ ಮಾಡುವ ವಿಧಾನದ ವಿಡಿಯೋ


ಪರೀಕ್ಷಾ ವಿಧಾನ : 
KSET ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
    ಪತ್ರಿಕೆಪ್ರಶ್ನೆಗಳ ಸಂಖ್ಯೆಅಂಕಗಳು
    I50100
    II100200

    ಪರೀಕ್ಷಾ ಪಠ್ಯಕ್ರಮ :
    ಪತ್ರಿಕೆ - I :-
    ಸಾಮಾನ್ಯ ಪತ್ರಿಕೆಯು ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಮತ್ತು ಬುದ್ದಿ ಸಾಮರ್ಥ್ಯಗಳನ್ನು ಪರೀಕ್ಷಿಸುವುದಾಗಿರುತ್ತದೆ. 
    Download ಪತ್ರಿಕೆ - I ರ ಪಠ್ಯಕ್ರಮ

    ಪತ್ರಿಕೆ II  :- 
    ಈ ಪತ್ರಿಕೆಯು ಅಭ್ಯರ್ಥಿಯ ಆಯ್ಕೆ ಮಾಡಿದ ವಿಷಯದ್ದಾಗಿರುತ್ತದೆ. ಈ ಪತ್ರಿಕೆಯು ಆಯ್ಕೆ ಮಾಡಿದ ವಿಷಯಗಳಲ್ಲಿ 100 ಕಡ್ಡಾಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೂ 2 ಅಂಕಗಳಿರುತ್ತದೆ. ಗರಿಷ್ಠ 200 ಅಂಕಗಳಿರುತ್ತವೆ. 
                         ಕೆಸೆಟ್ (KSET) ಪರೀಕ್ಷೆಯ ಪತ್ರಿಕೆ I ಮತ್ತು ಪತ್ರಿಕೆ - II ಪಠ್ಯಕ್ರಮವು, ಯು.ಜಿ.ಸಿ / ಸಿ.ಎಸ್.ಐ.ಆರ್ ನೆಟ್ ನಿಗದಿಪಡಿಸಿರುವ ಪಠ್ಯಕ್ರಮದ ಮಾದರಿಯಲ್ಲೇ ಇರುತ್ತದೆ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಿಂದ (http://kea.kar.nic.in) Download ಮಾಡಿಕೊಳ್ಳುವುದು. ಕೆಸೆಟ್ ಪರೀಕ್ಷೆಯು 41 ವಿಷಯಗಳ ಹೆಸರು, ವಿಷಯಗಳ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಆವೃತ್ತಿಯ ವಿವರಗಳು ಈ ಕೆಳಕಂಡಂತಿರುತ್ತವೆ.       
    1. ಮಹಿಳಾ ಅಧ್ಯಯನ ವಿಷಯ ಪಠ್ಯಕ್ರಮ
    2.  ದೃಶ್ಯ ಕಲೆಗಳ ವಿಷಯ ಪಠ್ಯಕ್ರಮ
    3.  ಉರ್ದು ವಿಷಯ ಪಠ್ಯಕ್ರಮ
    4.  ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣಾ ವಿಷಯ ಪಠ್ಯಕ್ರಮ
    5.  ಸಮಾಜಶಾಸ್ತ್ರ ವಿಷಯ ಪಠ್ಯಕ್ರಮ
    6.  ಸಮಾಜ ಕಾರ್ಯ ವಿಷಯ ಪಠ್ಯಕ್ರಮ
    7.  ಸಂಸ್ಕೃತ ವಿಷಯ ಪಠ್ಯಕ್ರಮ
    8.  ಸಾರ್ವಜನಿಕ ಆಡಳಿತ ವಿಷಯ ಪಠ್ಯಕ್ರಮ
    9.  ಮನೋವಿಜ್ಞಾನ ವಿಷಯ ಪಠ್ಯಕ್ರಮ
    10.  ರಾಜ್ಯಶಾಸ್ತ್ರ ವಿಷಯ ಪಠ್ಯಕ್ರಮ
    11.  ಭೌತಿಕ ವಿಜ್ಞಾನ ವಿಷಯ ಪಠ್ಯಕ್ರಮ
    12.  ದೈಹಿಕ ಶಿಕ್ಷಣ ವಿಷಯ ಪಠ್ಯಕ್ರಮ
    13.  ತತ್ವಶಾಸ್ತ್ರ ವಿಷಯ ಪಠ್ಯಕ್ರಮ
    14.  ಪ್ರದರ್ಶನ ಕಲೆಗಳ ವಿಷಯ ಪಠ್ಯಕ್ರಮ
    15.  ಸಂಗೀತ ವಿಷಯ ಪಠ್ಯಕ್ರಮ
    16.  ಗಣಿತ ವಿಜ್ಞಾನ ವಿಷಯ ಪಠ್ಯಕ್ರಮ
    17.  ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪಠ್ಯಕ್ರಮ
    18.  ಮರಾಠಿ ವಿಷಯ ಪಠ್ಯಕ್ರಮ
    19.  ನಿರ್ವಹಣಾ ವಿಷಯ ಪಠ್ಯಕ್ರಮ
    20.  ಭಾಷಾಶಾಸ್ತ್ರ ವಿಷಯ ಪಠ್ಯಕ್ರಮ
    21.  ಜೀವ ವಿಜ್ಞಾನ ವಿಷಯ ಪಠ್ಯಕ್ರಮ
    22.  ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯ ಪಠ್ಯಕ್ರಮ
    23.  ಕಾನೂನು ವಿಷಯ ಪಠ್ಯಕ್ರಮ
    24.  ಕನ್ನಡ ವಿಷಯ ಪಠ್ಯಕ್ರಮ
    25.  ಗೃಹ ವಿಜ್ಞಾನ ವಿಷಯ ಪಠ್ಯಕ್ರಮ
    26.  ಇತಿಹಾಸ ವಿಷಯ ಪಠ್ಯಕ್ರಮ
    27.  ಹಿಂದಿ ವಿಷಯ ಪಠ್ಯಕ್ರಮ
    28.  ಭೂಗೋಳಶಾಸ್ತ್ರ ವಿಷಯ ಪಠ್ಯಕ್ರಮ
    29.  ಜಾನಪದ ಸಾಹಿತ್ಯ ವಿಷಯ ಪಠ್ಯಕ್ರಮ
    30.  ಪರಿಸರ ವಿಜ್ಞಾನ ವಿಷಯ ಪಠ್ಯಕ್ರಮ
    31.  ಇಂಗ್ಲಿಷ್ ವಿಷಯ ಪಠ್ಯಕ್ರಮ
    32.  ವಿದ್ಯುನ್ಮಾನ ವಿಜ್ಞಾನ ವಿಷಯ ಪಠ್ಯಕ್ರಮ
    33.  ಅರ್ಥಶಾಸ್ತ್ರ ವಿಷಯ ಪಠ್ಯಕ್ರಮ
    34.  ಶಿಕ್ಷಣ ವಿಷಯ ಪಠ್ಯಕ್ರಮ
    35.  ಭೂ ವಿಜ್ಞಾನ ವಿಷಯ ಪಠ್ಯಕ್ರಮ
    36.  ಅಪರಾಧಶಾಸ್ತ್ರ ವಿಷಯ ಪಠ್ಯಕ್ರಮ
    37.  ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲಿಕೇಶನ್ ಪಠ್ಯಕ್ರಮ
    38.  ವಾಣಿಜ್ಯ ವಿಷಯ ಪಠ್ಯಕ್ರಮ
    39.  ರಾಸಾಯನಿಕ ವಿಜ್ಞಾನ ವಿಷಯ ಪಠ್ಯಕ್ರಮ
    40.  ಪುರಾತತ್ವ ವಿಷಯ ಪಠ್ಯಕ್ರಮ
    41.  ಮಾನವಶಾಸ್ತ್ರ ವಿಷಯ ಪಠ್ಯಕ್ರಮ

    ಶ್ರೀ ನಾಡಪ್ರಭು ಕೆಂಪೇಗೌಡರ ಕುರಿತು ರಸಪ್ರಶ್ನೆ

    ಶ್ರೀ ನಾಡಪ್ರಭು ಕೆಂಪೇಗೌಡರ ಕುರಿತು ರಸಪ್ರಶ್ನೆ

              ಶ್ರೀ ನಾಡಪ್ರಭು ಕೆಂಪೇಗೌಡ ಬೆಂಗಳೂರು ನಗರದ ನಿರ್ಮಾಪಕರು  ದೂರದೃಷ್ಟಿ ಮತ್ತು ಆಡಳಿತಾತ್ಮಕ ಕೌಶಲ್ಯಗಳಿಗೆ ಹೆಸರುವಾಸಿಯಾದ ಧೀಮಂತ ನಾಯಕ. ಆರ್ಥಿಕ ಹಿತಚಿಂತನೆ, ಕೃಷಿ, ನೀರಾವರಿ, ನಿರ್ಮಾಣ ಮುಂತಾದ ಸುಧಾರಣೆಗಳನ್ನು ತರುವ ಮೂಲಕ ಜಾಗತಿಕ ಮನ್ನಣೆಗೆ‌ ಕಾರಣವಾದ ಇವರ ಕುರಿತು ಪ್ರಶ್ನೋತ್ತರಗಳ ಮೂಲಕ  ತಿಳಿಯುತ್ತ ಹೋಗೋಣ.

    ಸೂಚನೆ :- ಪ್ರತಿ ಪ್ರಶ್ನೆಗಳ ಕೆಳಗೆ Show Answer ಬಟನ್ ಇದ್ದು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಉತ್ತರವನ್ನು ನೋಡಬಹುದು.

    Q ➤ 1. 1ನೇ ಕೆಂಪೇಗೌಡ ಯಾವ ರಾಜ ವಂಶಸ್ಥಕ್ಕೆ ಸೇರಿದ ರಾಜ?


    Q ➤ 2. ಹಿರಿಯ ಕೆಂಪೇಗೌಡ ಯಾವಾಗ ಜನಿಸಿದರು?


    Q ➤ 3. ಕೆಂಪೇಗೌಡರ ತಂದೆಯ ಹೆಸರೇನು?


    Q ➤ 4. ಕೆಂಪೇಗೌಡರ ತಾಯಿಯ ಹೆಸರೇನು?


    Q ➤ 5. ಕೆಂಪೇಗೌಡರ ಕುಲಗುರುಗಳು ಯಾರು?


    Q ➤ 6. ಕೆಂಪೇಗೌಡರ ಧರ್ಮಪತ್ನಿಯ ಹೆಸರೇನು?


    Q ➤ 7. ಕೆಂಪೇಗೌಡರು ಕಟ್ಟಿಸಿದ ಪ್ರಸಿದ್ದ ನಗರದ ಹೆಸರೇನು?


    Q ➤ 8. ಬೆಂಗಳೂರು ನಗರವನ್ನು ಯಾವ ವರ್ಷದಲ್ಲಿ ಕಟ್ಟಿಸಿದರು?


    Q ➤ 9. ಕೆಂಪೇಗೌಡ ನ ಯಾವ ಸಾಮ್ರಾಜ್ಯದ ಸಾಮಂತ ದೊರೆಯಾಗಿದ್ದರು?


    Q ➤ 10. ಬೆಂಗಳೂರು ನಗರ ಎಷ್ಟನೇ ಶತಮಾನದಲ್ಲಿ ನಿರ್ಮಿಸಲಾಯಿತು?


    Q ➤ 11. ಯಾರ ನೆನಪಿಗಾಗಿ ಬೆಂಗಳೂರು ನಗರವನ್ನು ನಿರ್ಮಿಸಲಾಯಿತು?


    Q ➤ 12. ವಿಜಯ ದಶಮಿಯ ಮಲ್ಲಯುದ್ದದಲ್ಲಿ ಕೆಂಪೇಗೌಡರು ಸೋಲಿಸಿದ ಜಟ್ಟಿಯ ಹೆಸರೇನು?


    Q ➤ 13. ರಣದುಲ್ಲಾಖಾನ ಯಾವ ಸುಲ್ತಾನರ ಸಾಮ್ರಾಜ್ಯಕ್ಕೆ ಸೇರಿದವನು?


    Q ➤ 14. ಅರ್ಕಾವತಿ ನದಿಯ ಉಗಮತಾಣ ಯಾವುದು?


    Q ➤ 15. ಬೆಂಗಳೂರು ನಗರಕ್ಕೆ ಇರುವ ಮುಖ್ಯದ್ವಾರಗಳು ಎಷ್ಟು?


    Q ➤ 16. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪೂರ್ವದ ಮುಖ್ಯದ್ವಾರ ಯಾವುದು?:


    Q ➤ 17. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಪಶ್ಚಿಮದ ಮುಖ್ಯದ್ವಾರ ಯಾವುದು?


    Q ➤ 18. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಉತ್ತರದ ಮುಖ್ಯದ್ವಾರ ಯಾವುದು?


    Q ➤ 19.ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ದಕ್ಷಿಣದ ಮುಖ್ಯದ್ವಾರ ಯಾವುದು?


    Q ➤ 20. ಬೆಂಗಳೂರು ನಗರದ ಕೋಟೆ ನಿರ್ಮಾಣಕ್ಕೆ ತನ್ನ ಪ್ರಾಣವನ್ನೆ ಬಲಿ ಕೊಟ್ಟ ನಾಡಪ್ರಭುಗಳ ಸೊಸೆಯ ಹೆಸರೇನು?


    Q ➤ 21. ಕೆಂಪೇಗೌಡ ನಿರ್ಮಿಸಿದ ಒಟ್ಟು ಕೋಟೆಗಳು ಎಷ್ಟು?


    Q ➤ 22. ಸಾ.ಶ 1537 ರಲ್ಲಿ ಕಟ್ಟಿಸಿದ ಬೆಂಗಳೂರು ಕೋಟೆಯು ಯಾವುದರಿಂದ ನಿರ್ಮಾಣಗೊಂಡಿತ್ತು?


    Q ➤ 23. "ಯಲಹಂಕದ ನಾಡಪ್ರಭುಗಳು" ಎಂಬ ಬಿರದನ್ನು ನೀಡಿದವರು ಯಾರು?


    Q ➤ 24. ಬೆಂಗಳೂರು ನಿರ್ಮಾಣ ಮಾಡಲು ಕೆಂಪೇಗೌಡರಿಗೆ ಸಹಾಯ ಮಾಡಿದ ವಿಜಯನಗರದ ಅರಸ ಯಾರು?


    Q ➤ 25. ಕೆಂಪೇಗೌಡ ತನ್ನ ಆಡಳಿತದ ಅನುಕೂಲಕ್ಕಾಗಿ ಟಂಕಿಸಿದ ನಾಣ್ಯದ ಹೆಸರೇನು?


    Q ➤ 26. ಕಂಪೇಗೌಡರನ್ನು ಭೈರವ ನಾಣ್ಯ ಟಂಕಿಸಿದ್ದಾಕ್ಕಾಗಿ ಯಾವ ಜೈಲಿನಲ್ಲಿ ಬಂಧಿಸಿಡಲಾಯಿತು?


    Q ➤ 27. ಕೆಂಪೇಗೌಡರ ನಿಧನಗೊಂಡಿದ್ದು ಯಾವಾಗ?


    Q ➤ 28. ಕೆಂಪೇಗೌಡರ ಸಮಾಧಿ ಸ್ಥಳ ಎಲ್ಲಿದೆ?


    Q ➤ 29. ಇತ್ತೀಚಿಗೆ ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಹೇಸರೇನು?


    Q ➤ 30.ಕೆಂಪೇಗೌಡರ ಕಾಲಾವಧಿಯಲ್ಲಿ ತೊಲಗಿಸಿದ ಸಂಪ್ರದಾಯ ಸಮಾಜದ ಅನಿಷ್ಟ ಪದ್ಧತಿ ಯಾವುದು?.


    Q ➤ 31. ಕೆಡಂಪೇಗೌಡರ ಆರಾಧ್ಯ ಧೈವ ಯಾವುದು?


    Q ➤ 32. ಕೆಂಪೇಗೌಡರು ರಚಿಸಿದ ಕೃತಿ ಯಾವುದು?


    Q ➤ 33. ಕೆಂಪೇಗೌಡರು ರಚಿಸಿದ ಕೃತಿ ಯಾವ ಭಾಷೆಯಲ್ಲಿದೆ?


    Q ➤ 34. ನಾಡಪ್ರಭು ಕೆಂಪೇಗೌಡರ 108 ಅಡಿ ಪುತ್ಥಳಿಯನ್ನು ಎಷ್ಟನೇ ಜಯಂತೋತ್ಸವದ ನೆನಪಿಗಾಗಿ ಸ್ಥಾಪಿಸಲಾಯಿತು?


    Q ➤ 35. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಯಾವ ತಾಲ್ಲೂಕಿನಲ್ಲಿದೆ?


    Q ➤ 36. ಬೆಂಗಳೂರು ಕಟ್ಟಿಸಿದ ದೊರೆ ಯಾರು?


    Q ➤ 37. ಕೆಂಪೇಗೌಡರು ಆಳ್ವಿಕೆ ಮಾಡಿದ್ದು ಎಷ್ಟನೇ ಶತಮಾನ ?


    Q ➤ 38. ಮೊದಲನೆಯ ಕೆಂಪೇಗೌಡರು ಯಾವ ಸಾಮ್ರಾಜ್ಯದ ಸಾಮಂತ ಅರಸರಾಗಿದ್ದರು?


    Q ➤ 39. ಕೆಂಪೇಗೌಡರ ಕುಲದೇವರು ಯಾರು?


    Q ➤ 40. ಕೆಂಪೇಗೌಡರ ಪಟ್ಟಾಭಿಷೇಕ ಯಾವಾಗ ಮಾಡಲಾಯಿತು?


    Q ➤ 41. ಕೆಂಪೇಗೌಡರು ಕೆಂಪಮ್ಮನ ಹೆಸರಿನಲ್ಲಿ ಕಟ್ಟಿಸಿದ ಕೆರೆಯ ಹೆಸರೇನು?


    Q ➤ 42. ಕೆಂಪೇಗೌಡರಿಗೆ ಶಿಕ್ಷಣ ನೀಡಿದ ಗುರುಗಳ ಹೆಸರೇನು?


    Q ➤ 43.ಕೆಂಪೇಗೌಡರು ಮದ್ದುಗುಂಡಿನ ಕಾರ್ಖಾನೆ ಸ್ಥಾಪಿಸಿದ ಸ್ಥಳ ಯಾವುದು?


    Q ➤ 44. ಕೆಂಪೇಗೌಡ ಯಾವ ದೇವರ ಆರಾಧಕರಾಗಿದ್ದರು


    Q ➤ 45. ತಾಳಿಕೋಟಿ ಕದನದಲ್ಲಿ ಭಾಗವಹಿಸಲು ಕೆಂಪೇಗೌಡರು 2000 ಸೈನಿಕರೊಂದಿಗೆ ಯಾರನ್ನು ಕಳುಹಿಸಿಕೊಟ್ಟರು?


    Q ➤ 46. ಇತ್ತೀಚಿಗೆ ಯಾವ ವರ್ಷ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.


    Q ➤ 47.ಇತ್ತೀಚಿಗೆ ಅನಾವರಣಗೊಳಿಸಿದ ಕೆಂಪೇಗೌಡರ ಪ್ರತಿಮೆ ಯಾವ ಲೋಹದಿಂದ ಮಾಡಲಾಗಿದೆ?


    Q ➤ 48. ಕೆಂಪೇಗೌಡರ ಪ್ರತಿಮೆಯ ಎತ್ತರ ಎಷ್ಟು?


    Q ➤ 49. ಕೆಂಪೇಗೌಡ ಪ್ರತಿಮೆಯ ನಿರ್ಮಾಣಕ್ಕೆ ಖರ್ಚಾದ ಹಣವೆಷ್ಟು?


    Q ➤ 50.ಕೆಂಪೇಗೌಡರ ಪ್ರತಿಮೆಯಲ್ಲಿರುವ ಖಡ್ಗದ ಒಟ್ಟು ತೂಕವೆಷ್ಟು?


    Q ➤ 51. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?


    Q ➤ 52. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹೆಸರೇನು?


    Q ➤ 53. ಕೆಂಪೇಗೌಡರು ಯಾವಾಗ ತಂದೆಯಿಂದ ಅಧಿಕಾರ ಪಡೆದು ರಾಜ್ಯಭಾರ ಆರಂಭಿಸಿದರು?


    Q ➤ 54.ಕೆಂಪೇಗೌಡರ ಆಡಳಿತದ ಅವಧಿಯಲ್ಲಿಯ ಎಷ್ಟು ಶಾಸನಗಳು ಇಲ್ಲಿಯವರೆಗೆ ದೊರೆತಿವೆ?


    Q ➤ 55. ವಿಜಯನಗರ ಅರಸ ಅಚ್ಯುತರಾಯ ಕೆಂಪೇಗೌಡರಿಗೆ ಎಷ್ಟು ಹೋಬಳಿಗಳನ್ನು ಉಡುಗೊರೆಯಾಗಿ ನೀಡಿದನು?


    Q ➤ 56. ಬೆಂಗಳೂರು ನಗರ ನಿರ್ಮಾಣಕ್ಕೆ ಕೆಂಪೇಗೌಡರಿಗೆ ಸ್ಪೂರ್ತಿಯಾದ ಸ್ಥಳ ಯಾವುದು?


    Q ➤ 57. ಕೆಂಪೇಗೌಡರು ಯಾವ ಮನೆತನಕ್ಕೆ ಸೇರಿದವರು?


    Q ➤ 58. ಕೆಂಪೇಗೌಡರ ಪೂರ್ವಜರು ಯಾವುದನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ಮಾಡುತ್ತಿದ್ದರು?


    Q ➤ 59.ಬೆಂಗಳೂರನ್ನು ಕೆಂಪೇಗೌಡರು ನಿರ್ಮಿಸಿದ ವರ್ಷ ಯಾವುದು?


    Q ➤ 60. ಕೆಂಪೇಗೌಡರು ಬೆಂಗಳೂರು ಸುತ್ತಲೂ ನಿರ್ಮಿಸಿದ ದ್ವಾರಗಳು ಎಷ್ಟು?.


    Q ➤ 61. ಕೆಂಪೇಗೌಡರು ಬೆಂಗಳೂರಿನಲ್ಲಿ ನಿರ್ಮಿಸಿದ ಒಟ್ಟು ಪೇಟೆಗಳ ಸಂಖ್ಯೆ ಎಷ್ಟು?


    Q ➤ 62. ಕೆಂಪೇಗೌಡರನ್ನು ಯಾವ ನಗರದ ನಿರ್ಮಾತೃ ಎಂದು ಕರೆಯುತ್ತಾರೆ ?


    Q ➤ 63.ಬೆಂಗಳೂರಿನ ಹಳೆಯ ಅಥವಾ ಪ್ರಾಚೀನ ಹೆಸರೇನು?


    Q ➤ 64. ಕೆಂಪೇಗೌಡ ಎಲ್ಲಿ ಜನಿಸಿದರು ?


    Q ➤ 65. ಕೆಂಪೇಗೌಡರ ಸೊಸೆಯ ಹೆಸರೇನು?


    Q ➤ 66. ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಸುಮಾರು ಎಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಿದರು?


    Q ➤ 67.ಕೆಂಪೇಗೌಡ ಯಾವಾಗ ನಿಧನರಾದರು?


    Q ➤ 68. ಯಾವ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಡಲಾಗಿದೆ ?


    Q ➤ 69. ಕೆಂಪೇಗೌಡರ ಪ್ರತಿಮೆಯನ್ನು ಇತ್ತೀಚಿಗೆ ಎಲ್ಲಿ ಅನಾವರಣಗೊಳಿಸಲಾಯಿತು?


    Q ➤ 70. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಾರು?


    Q ➤ 71. ಇತ್ತೀಚಿಗೆ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದವರು ಯಾರು?


    Q ➤ 72. ಯಲಹಂಕ ನಾಡಪ್ರಭುಗಳಲ್ಲಿ ಪ್ರಸಿದ್ದ ರಾಜ ಯಾರು?


    Q ➤ 73. ಕೆಂಪೇಗೌಡ ಹೆಸರಿನ ಸಿನಿಮಾದಲ್ಲಿ ಪೋಲಿಸ್ ಅಧಿಕಾರಿ ಕೆಂಪೇಗೌಡನ ಪಾತ್ರದಲ್ಲಿ ನಟನೆ ಮಾಡಿದ ನಟ ಯಾರು?


    Q ➤ 74. ಕೆಂಪೇಗೌಡರು ಯಾವುದರ ಆಧಾರದ ಮೇಲೆ ಪೇಟೆಗಳನ್ನು ನಿರ್ಮಿಸಿದರು?