Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (501-550)

ಸರ್ವಜ್ಞ ವಚನ 501 :
ಹಾಸಾಂಗಿ ಹರೆಯುವಡೆ ।
ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ ।
ಈಶನ ಒಲುಮೆ ಸರ್ವಜ್ಞ||

ಸರ್ವಜ್ಞ ವಚನ 502 :
ಅಟ್ಟಿ ಹರಿದಾಡುವದು ಬಟ್ಟೆಯಲಿ ಮೆರೆಯುವದು
ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ
ಹಿಟ್ಟು ಕಾಣಯ್ಯಾ ಸರ್ವಜ್ಞ||

ಸರ್ವಜ್ಞ ವಚನ 503 :
ತಂದೆಗೆ ಗುರುವಿಗೆ | ಒಂದು ಅಂತರವುಂಟು
ತಂದೆ ತೋರುವನು ಶ್ರೀಗುರುವ – ಗುರುರಾಯ
ಬಂಧನವ ಕಳೆವ ಸರ್ವಜ್ಞ||

ಸರ್ವಜ್ಞ ವಚನ 504 :
ಊರು ಸನಿಹದಲಿಲ್ಲ । ನೀರೊಂದು ಗಾವುದವು ।
ಸೇರಿ ನೆರ್‍ಅಳಿಲ್ಲ ಬಡಗಲಾ ।
ದಾರಿಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 505 :
ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
ಸರಿಮ್ಮನೇ ಕೆಡಗು ಸರ್ವಜ್ಞ||

ಸರ್ವಜ್ಞ ವಚನ 506 :
ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
ಲಿಂಗವುಂಬುವದೆ ? ಇದನರಿದು ಕಪಿಯೆ ನೀ
ಜಂಗಮಕೆ ನೀಡು ಸರ್ವಜ್ಞ||

ಸರ್ವಜ್ಞ ವಚನ 507 :
ಜೋಳವಾಳಿಯು ಹೊಲ್ಲ ಕೀಳಿನೊಳ ಇರಹೊಲ್ಲ ।
ಹೇಳದೌತನಕ್ಕೆ ಬರಹೊಲ್ಲ ಕೊಂಡೆಯನ ।
ಗಾಳಿಯೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 508 :
ಕುಡಿವ ನೀರ ತಂದು , ಅಡಿಗೆ ಮಾಡಿದ ಮೇಲೆ
ಬಡಲುಣ್ಣಲಾಗದಿಂತೆಂಬ , ಮನುಜರ
ಬಡನಾಟವೇಕೆ ? ಸರ್ವಜ್ಞ||

ಸರ್ವಜ್ಞ ವಚನ 509 :
ಹೆಣ್ಣನ್ನು ಹೊನ್ನನ್ನು । ಹಣ್ಣಾದ ಮರಗಳನ್ನು ।
ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ ।
ಅಣ್ಣಗಳು ಯಾರು ಸರ್ವಜ್ಞ||

ಸರ್ವಜ್ಞ ವಚನ 510 :
ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ
ಮತ್ತೆ ಪಾದದಾ ಕೆರವಾಗಿ ಗುರುವಿನಾ
ಹತ್ತಿಲಿರು ಸರ್ವಜ್ಞ||

ಸರ್ವಜ್ಞ ವಚನ 511 :
ದೇವರನು ನೆನೆವಂಗ । ಭಾವಿಪುದ ಬಂದಿಹುದು ।
ದೇವರನು ನೆನಯದಧಮಂಗೆ ಇಹಪರದಿ ।
ಆಪುದೂ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 512 :
ನಾನು-ನೀನುಗಳದು, ತಾನು ಲಿಂಗದಿ ಉಳಿದು
ನಾನಾ ಭ್ರಮೆಗಳ ಅತಿಗಳೆದು ನಿಂದಾತ
ತಾನೈಕ್ಯ ನೋಡು ಸರ್ವಜ್ಞ||

ಸರ್ವಜ್ಞ ವಚನ 513 :
ಒಡಲನಡಗಿದ ವಿದ್ಯೆ ।
ನಡೆದೊಡನೆ ಬರುತಿರಲು ಒಡಹುಟ್ಟಿದವರು
ಕಳ್ಳರೂ ನೃಪರೆಂದು ಪಡೆಯರದನೆಂದ । ಸರ್ವಜ್ಞ||

ಸರ್ವಜ್ಞ ವಚನ 514 :
ಆಳಾಗಬಲ್ಲವನು ಆಳುವನು ಅರಸಾಗಿ
ಆಳಾಗಿ ಬಾಳಲರಿಯದವನು ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ||

ಸರ್ವಜ್ಞ ವಚನ 515 :
ಕತ್ತೆಗಂ ಕೋಡಿಲ್ಲ। ತೊತ್ತಿಗಂ ಗುಣವಿಲ್ಲ।
ಹತ್ತಿಯ ಹೊಲಕೆ ಗಿಳಿಯಿಲ್ಲ ಡೊಂಬನಿಗೆ।
ವೃತ್ತಿಯೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 516 :
ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ – ವಿಜಾತಿ ಏನಬೇಡ , ದೇವನೊಲಿ
ದಾತದೆ ಜಾತಾ , ಸರ್ವಜ್ಞ||

ಸರ್ವಜ್ಞ ವಚನ 517 :
ಮನಸು ಇಲ್ಲದೆ ದೇವಸ್ಥಾನ ಸುತ್ತಿದಲ್ಲಿ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯ ವಾಗಿ ಸುತ್ತಿ ಬಂದಂತೆ ಸರ್ವಜ್ಞ||

ಸರ್ವಜ್ಞ ವಚನ 518 :
ಈರೈದು ತಲೆಯುಳ್ಳ । ಧೀರ ರಾವಣ ಮಡಿದ ।
ವೀರ ಕೀಚಕನು ಗಡೆ ಸತ್ತು ಪರಸತಿಯ ।
ದಾರಿ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 519 :
ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ||

ಸರ್ವಜ್ಞ ವಚನ 520 :
ಮುನ್ನ ಪೂರ್ವದಲಾನು । ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು-ಎಂದು
ಮನ್ನಿಪರು ನೋಡ ಸರ್ವಜ್ಞ||

ಸರ್ವಜ್ಞ ವಚನ 521 :
ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ – ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ||

ಸರ್ವಜ್ಞ ವಚನ 522 :
ಒಣಗಿದಾ ಮರ ಚಿಗಿತು । ಬಿಣಿಲು ಬಿಡುವುದ ಕಂಡೆ ।
ತಣಿಗೆಯಾ ತಾಣಕದು ಬಹುದು ಕವಿಗಳಲಿ
ಗುಣಯುತರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 523 :
ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ
ಬಿಸಿ ಮಾಡಿ ತಂಗುಳುಣಬೇಡ ವೈದ್ಯನಾ
ಗಸಣೆಯೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 524 :
ಆವ ಕಾಲವು ವನದಿ । ಜೀವಕಾಲದ ಕಳೆದು ।
ಜೀವಚಯದಲ್ಲಿ ದಯವಿಲ್ಲದಿರುವವನ ।
ಕಾಯ್ವ ಶಿವನು ಸರ್ವಜ್ಞ||

ಸರ್ವಜ್ಞ ವಚನ 525 :
ಮೆಟ್ಟಿರಿಯೆ ಜೀವ ತಾ । ತಟ್ಟನೇ ಹೋಗುವದು ।
ಕೆಟ್ಟನಾಲಿಗೆಯಲಿರಿಹರೆ ಕಾದು ನೀ ।
ರಟ್ಟಿ ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 526 :
ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
ಹಸಿವಕ್ಕು ಸಿಕ್ಕ ಮಲ ಬಿಡುಗು – ದೇಹ ತಾ
ಸಸಿನವಾಗುವುದು ಸರ್ವಜ್ಞ||

ಸರ್ವಜ್ಞ ವಚನ 527 :
ವನಧಿಯೊಳಡಗಿ ತೆರೆ । ವನಧಿಯೊಳಗೆಸೆವಂತೆ ।
ಚಿನುಮಯನು ಇಪ್ಪ ನಿಜದೋಳಗೆ ತ್ರೈಜಗತ ।
ಜನನ ತಾನೆಂದು ಸರ್ವಜ್ಞ||

ಸರ್ವಜ್ಞ ವಚನ 528 :
ರಾಗವೇ ಮೂಡಲು। ಯೋಗವೇ ಬಡಗಲು।
ರೋಗವದು ಶುದ್ಧ ಪಡುವಲು, ತೆಂಕಲು।
ಭೋಗದ ಬೀಡು ಸರ್ವಜ್ಞ||

ಸರ್ವಜ್ಞ ವಚನ 529 :
ಹಿಂದೆ ಪಾಪವ ಮಾಡಿ । ಮುಂದೆ ಪುಣ್ಯವು ಹೇಗೆ ।
ಹಿಂದು – ಮುಂದರಿದು ನಡೆಯದಿರೆ
ನರಕದಲಿ ಬೆಂದು ಸಾಯುವನು ಸರ್ವಜ್ಞ||
ಸರ್ವಜ್ಞ ವಚನ 530 :
ಸುಟ್ಟೊಲೆಯು ಬಿಡದೆ ತಾ । ನಟ್ಟ ಮೇಲುರಿದಂತೆ ।
ಕೊಟ್ಟಮೇಲುರಿವ ನಳಿಯನೆಂಬೀ ಮಾತು ।
ಕಟ್ಟಿ ಇಟ್ಟಂತೆ ಸರ್ವಜ್ಞ||

ಸರ್ವಜ್ಞ ವಚನ 531 :
ಪುಷ್ಪವಿಲ್ಲದ ಪೂಜೆ। ಅಶ್ವವಿಲ್ಲದ ಅರಸು।
ಅಪ್ಪಲೊಲ್ಲದಳ ನಗೆನುಡಿಯು ಇವು ಮೂರು।
ಚಪ್ಪೆ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 532 :
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರೆಮನೆಯಕ್ಕು ಸರ್ವಜ್ಞ||

ಸರ್ವಜ್ಞ ವಚನ 533 :
ಗುರಿಯ ತಾಗದ ಕೋಲ । ನೂರಾರುನೆಸೆದೇನು ? ।
ಬರಡಿಂಗ ಭಕ್ತಿ ಭಜಸಿದೊಡೆ ಅದು ತಾನು ।
ಇರಲರಿಯದಯ್ಯ ಸರ್ವಜ್ಞ||

ಸರ್ವಜ್ಞ ವಚನ 534 :
ಹೊಲಬನರಿಯದ ಗುರುವು । ತಿಳಿಯಲರಿಯದ ಶಿಷ್ಯ
ನೆಲೆಯನಾರಯ್ಯದುಪದೇಶ – ವಂಧಕನು
ಕಳನ ಹೊಕ್ಕಂತೆ ಸರ್ವಜ್ಞ||

ಸರ್ವಜ್ಞ ವಚನ 535 :
ಮಕ್ಕಳಿಲ್ಲವು ಎಂದು । ಅಕ್ಕಮಲ್ಲಮ್ಮನು
ದುಕ್ಕದಿ ಬಸವ । ಗರಿಪಲ್ಲವ । – ಕಾಶಿಯ
ಮುಕ್ಕಣ್ಣಗೆ ಹೋದ ಸರ್ವಜ್ಞ||

ಸರ್ವಜ್ಞ ವಚನ 536 :
ನಿದ್ದೆಗಳು ಬಾರದವು । ಬುದ್ಧಿಗಳೂ ತಿಳಿಯುವವು ।
ಮುದ್ದಿನ ಮಾತುಗಳು ಸೊಗಸದದು ಬೋನದಾ ।
ಮುದ್ದೆ ತಪ್ಪಿದರೆ ಸರ್ವಜ್ಞ||

ಸರ್ವಜ್ಞ ವಚನ 537 :
ಅನ್ಯ ಪುರುಷನ ಕಂಡು। ತನ್ನ ಪಡೆದವನೆಂದು।
ಮನ್ನಿಸಿ ನಡೆವ ಸತಿಯಳಿಗೆ ಸ್ವರ್ಗದೊಳು।
ಹೊನ್ನಿನ ಮನೆಯು ಸರ್ವಜ್ಞ||

ಸರ್ವಜ್ಞ ವಚನ 538 :
ಉಂಡು ನೂರಡಿಯಿಟ್ಟು
ಕೆಂಡಕ್ಕೆ ಕೈ ಕಾಸಿ
ಗಂಡುಭುಜ ಮೇಲ್ಮಾಡಿ
ಮಲಗುವನು ವೈದ್ಯನ
ಮಿಂಡನಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 539 :
ಎತ್ತ ಹೋದರು ಒಂದು । ತುತ್ತು ಕಟ್ಟಿರಬೇಕು ।
ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು ।
ಎತ್ತಬೇಕೆಂದ ಸರ್ವಜ್ಞ||

ಸರ್ವಜ್ಞ ವಚನ 540 :
ಚಂದ್ರ ಮಾರ್ತಾಂಡರನು । ಸಂಧಿಸಿಯೇ ಪರಿವೇಷ ।
ಕುಂದದಲೆ ನಿಚ್ಚ ಬರುತ್ತಿರಲು ಜಗವೆಲ್ಲ ।
ಕುಂದಿದಂತಿಹುದು ಸರ್ವಜ್ಞ||

ಸರ್ವಜ್ಞ ವಚನ 541 :
ಪರುಷ ಲೋಹವ ಮುಟ್ಟಿ । ವರುಷವಿರಬಲ್ಲುದೇ
ಪರಷವೆಂತಂತೆ ಶಿಷ್ಯಂಗೆ – ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ||

ಸರ್ವಜ್ಞ ವಚನ 542 :
ಗಂಗೆಯಲಿ ಹೊಲೆಯಿಲ್ಲ। ಲಿಂಗಕ್ಕೆ ಕಡೆಯಿಲ್ಲ।
ಕಂಗಳಿಗೆ ಬೆಳಗುಬೇಗಿಲ್ಲ ಸಾಯುವಗೆ।
ಸಂಗಡಿಗರಿಲ್ಲ ಸರ್ವಜ್ಞ||

ಸರ್ವಜ್ಞ ವಚನ 543 :
ನಿಂಬೆಗಿಂ ಹುಳಿಯಿಲ್ಲ । ತುಂಬೆಗಿಂ ಕರಿದಿಲ್ಲ ।
ನಂಬಿಗೆಯಿಂದಧಿಕ ಗುಣ್ವವಿಲ್ಲ । ದೈವವುಂ ।
ಶುಭವಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 544 :
ಆನೆ ಕನ್ನಡಿಯಲ್ಲಿ । ತಾನಡಗಿ ಇಪ್ಪಂತೆ ।
ಜ್ಞಾನವುಳ್ಳವರ ಹೃದಯದಲಿ ಪರಶಿವನು ।
ತಾನಡಗಿ ಇಹನು ಸರ್ವಜ್ಞ||

ಸರ್ವಜ್ಞ ವಚನ 545 :
ಹಂದೆ ಭಟರೊಳು ಹೊಲ್ಲ । ನಿಂದೆಯಾ ನುಡಿ ಹೊಲ್ಲ ।
ಕುಂದುಗುಲದವಳ ತರ ಹೊಲ್ಲ ಉರಿಯೊಳಗೆ ।
ನಿಂದಿರಲು ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 546 :
ರಂಧ್ರ – ಗತಿ – ಆದಿತ್ಯ । ನೊಂದಾಗಿ ಅರ್ಥಿಸುತ ।
ಅಂದಿನಾ ತಿಥಿಯನೊಡಗೂಡೆ ನಕ್ಷತ್ರ ।
ಮುಂದೆ ಬಂದಕ್ಕು ಸರ್ವಜ್ಞ||

ಸರ್ವಜ್ಞ ವಚನ 547 :
ಜಂಗಮಕೆ ವಂಚಿಸನು । ಹಿಂಗಿರಲು ಲಿಂಗವನು ।
ಭಕ್ತರೊಳು ಪರಸತಿಗೆ ಒಲೆಯದಗೆ ।
ಭಂಗವೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 548 :
ಜೋಳದಾ ಬೋನಕ್ಕೆ । ಬೇಳೆಯಾ ತೊಗೆಯಾಗಿ ।
ಕಾಳೆಮ್ಮೆ ಕರೆದ ಹೈನಾಗಿ ಬೆಳವಲದ ಮೇಳ
ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 549 :
ಕುಂದಳಿದವ ದೈವ । ಬಂಧ ಕಳೆದವ ದೈವ ।
ನೊಂದು ತಾ ನೋಯಿಸದವ ದೈವ ಹುಸಿಯದನೆ ।
ಇಂದುಧರನೆಂದ ಸರ್ವಜ್ಞ||

ಸರ್ವಜ್ಞ ವಚನ 550 :
ಹಾರುವರು ಎಂಬುವರು । ಏರಿಹರು ಗಗನಕ್ಕೆ ।
ಹಾರುವರ ಮೀರಿದವರಿಲ್ಲ ಅವರೊಡನೆ ।
ವೈರಬೇಡೆಂದ ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post